ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ಚೆನ್ನಪರಿ ಎಂ.ಎಸ್. ಕಾಂಪ್ಲೆಕ್ಸ್ ನಲ್ಲಿ ಸುಳ್ಯಕಾರ್ಸ್ ಹಮೀದ್ ಮತ್ತು ಇಬ್ರಾಹಿಂ ರವರ ಮಾಲಕತ್ವದ ಮಂಗಳೂರು ಸುಪಾರಿ ಕಾಡುತ್ಪತ್ತಿ ಖರೀದಿ ಕೇಂದ್ರವು ಜು.13 ರಂದು ಶುಭಾರಂಭಗೊಂಡಿದೆ.
ಉದ್ಯಮಿಗಳಾದ ಕುಶಾಲಪ್ಪ ಗೌಡ ರವರು ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಾಂಪ್ಲೆಕ್ಸ್ ಮಾಲಕ ಅರುಣ್ ಕುಮಾರ್ ನಾಯರ್ ಕಲ್ಲು, ನಿರಂಜನ್ ಕೋಡ್ತುಗುಳಿ , ಮುರಳೀಧರ ಕೋಡ್ತುಗುಳಿ, ಹರಿಶ್ಚಂದ್ರ ಕೋಡ್ತುಗುಳಿ, ವಿನಯ್ ಬೆದ್ರುಗದ್ದೆ, ಪ್ರವೀಣ್ ಚಿಲ್ಪಾರು ಮತ್ತಿತರರು ಉಪಸ್ಥಿತರಿದ್ದರು. ಅಡಿಕೆ, ರಬ್ಬರ್, ತೆಂಗಿನಕಾಯಿ, ಕೊಕ್ಕೋ, ಬಾಳೆಗೊನೆ, ಕರಿಮೆಣಸು ಹಾಗೂ ಇನ್ನಿತರ ಕಾಡುತ್ಪತ್ತಿ ಬೆಳೆಗಳಿಗೆ ಉತ್ತಮ ಬೆಲೆ ನೀಡಿ ರೈತರಿಂದ ಖರೀದಿಸಲಾಗುವುದು ಎಂದು ಮಾಲಕರು ತಿಳಿಸಿರುತ್ತಾರೆ.