ಇತಿಹಾಸ ಪ್ರಸಿದ್ಧ ಭೈರಜ್ಜಿ ನೇಮ
ಗುತ್ತಿಗಾರು ಗ್ರಾಮದ ಕಮಿಲ ಶ್ರೀ ಕನ್ನಡ ದೇವತೆಯಾನೆ ಪುರುಷ ದೈವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವದ ಪ್ರಯುಕ್ತ ಇಂದು ಪ್ರಾತಃ ಕಾಲ ಶ್ರೀ ಬೈರಜ್ಜಿ ನೇಮ ನಡೆಯಿತು. ಬೆಳಗ್ಗೆ 6:45 ಕ್ಕೆ ಆರಂಭವಾದ ಬೈರಜ್ಜಿ ಯ ಪ್ರಸಾದ ಸ್ವೀಕರಿಸಲು ನೂರಾರು ಜನ ಸರತಿ ಸಾಲಿನಲ್ಲಿ ನಿಂತಿದ್ದಾರೆ.
ಸಚಿವ ಅಂಗಾರ ಭೇಟಿ
ಬೈರಜ್ಜಿ ನೇಮ ಆರಂಭಕ್ಕೆ ಮೊದಲು ನಸುಕಿನ ಜಾವ ಸಚಿವ *ಎಸ್.ಅಂಗಾರ* ರವರು ದೈವಸ್ಥಾನಕ್ಕೆ ಭೇಟಿ ನೀಡಿದರು. ಆಡಳಿತ ಮೊಕ್ತೇಸರ ಕಾರ್ಯಪ್ಪ ಗೌಡ ಚಿಕ್ಮುಳಿ ಸಚಿವರಿಗೆ ಪ್ರಸಾದ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಬೆಳ್ಯಪ್ಪ ಗೌಡ ಕಡ್ತಲ್ಕಜೆ, ಅಚ್ಚುತ ಗುತ್ತಿಗಾರು, ದೇವಿಪ್ರಸಾದ್ ಚಿಕ್ಮುಳಿ,ಪುರುಷೋತ್ತಮ ಗೌಡ ಮಲ್ಕಜೆ ಮೊದಲಾದವರು ಉಪಸ್ಥಿತರಿದ್ದರು.