ಪ್ರಥಮ: ಯುವಕ ಮಂಡಲ ಕನಕಮಜಲು, ದ್ವಿತೀಯ: ರೈಡರ್ಸ್ ಕನಕಮಜಲು
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ಹಾಗೂ ಯುವಕ ಮಂಡಲ ಕನಕಮಜಲು ಇದರ ಆಶ್ರಯದಲ್ಲಿ ಅಂತರ್ ಜಿಲ್ಲಾ ಆಯ್ದ ತಂಡಗಳ ಲೀಗ್ ಮಾದರಿಯ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಪಂದ್ಯಾಟ ಕನಕಮಜಲಿನ ಶ್ರೀ ನ.ರಾ.ಗೌ.ಸ.ಮಾ.ಹಿ.ಪ್ರಾ. ಶಾಲಾ ಕ್ರೀಡಾಂಗಣದಲ್ಲಿ ಮಾ.10ರಂದು ರಾತ್ರಿ ನಡೆಯಿತು.
ಪಂದ್ಯಾಟವನ್ನು ತಾ.ಪಂ. ಸದಸ್ಯ ತೀರ್ಥರಾಮ ಬಾಳಾಜೆ ಉದ್ಘಾಟಿಸಿದರು. ಕನಕಮಜಲು ಗ್ರಾ.ಪಂ. ಅಧ್ಯಕ್ಷ ಶ್ರೀಧರ ಕುತ್ಯಾಳ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ, ಯುವ ಸಬಲೀಕರಣ, ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ, ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಅನಿಲ್ ಪೂಜಾರಿಮನೆ, ತಾಂತ್ರಿಕ ಕೃಷಿ ಅಧಿಕಾರಿ ಮೋಹನ ನಂಗಾರು, ಬಿ.ಎಸ್.ಎನ್.ಎಲ್ .ನಿವೃತ್ತ ತಾಂತ್ರಿಕ ಸಿಬ್ಬಂದಿ ಗೋಪಾಲಗೌಡ ನರಿಯೂರು, ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ನಾರಾಯಣ ಬೊಮ್ಮೆಟ್ಟಿ, ಪಿ.ಡಬ್ಲ್ಯೂ.ಡಿ. ಕಂಟ್ರಾಕ್ಟರ್ ಅವೀನ್ ಮಳಿ, ಜಾಲ್ಸೂರು ಸ್ಕಂದಶ್ರೀ ಅರ್ಥ್ ಮೂವರ್ಸ್ ಮಾಲಕ ಗಣೇಶ್ ಕೋಳ್ತಿಮಾರ್, ಕ್ರೀಡ ಕಾರ್ಯದರ್ಶಿ ಚಂದ್ರಶೇಖರ ನೆಡಿಲು, ಯು.ಮಂ. ಕಾರ್ಯದರ್ಶಿ ಬಾಲಚಂದ್ರ ನೆಡಿಲು, ಕಾರ್ಯಕ್ರಮದ ಸಂಯೋಜಕ ಹಾಗೂ ಗ್ರಾ.ಪಂ. ಸದಸ್ಯ ರವಿಚಂದ್ರ ಕಾಪಿಲ, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದ ಕಬ್ಬಡ್ಡಿ ಆಟಗಾರ ಸಚಿನ್ ಪ್ರತಾಪ ಐವರ್ನಾಡು ಅವರನ್ನು ಸನ್ಮಾನಿಸಲಾಯಿತು.
ಬಳಿಕ ನಡೆದ ಪಂದ್ಯಾಟದಲ್ಲಿ ಬ್ಯಾರೀಸ್ ಕಾಲೇಜು ಕೋಡಿ-ಕುಂದಾಪುರ ಮತ್ತು ಶಾರದಾ ಕಾಲೇಜು ತಲಪಾಡಿ ಮಂಗಳೂರು ತಂಡಗಳ ನಡುವೆ ಪ್ರಥಮ ಪಂದ್ಯ ಜರುಗಿತು.
ಪಂದ್ಯಾಟದಲ್ಲಿ ಎಸ್.ಡಿ.ಎಮ್. ಕಾಲೇಜು ಉಜಿರೆ, ಮಂಗಳೂರು ವಿಶ್ವವಿದ್ಯಾನಿಲಯ, ತೆಂಕನಿಡಿಯೂರು ಕಾಲೇಜು ಉಡುಪಿ, ಆಳ್ವಾಸ್ ಕಾಲೇಜು ಮೂಡಬಿದಿರೆ ತಂಡಗಳ ನಡುವೆ ಜಿದ್ದಾಜಿದ್ದಿನ ಪಂದ್ಯಗಳು ನಡೆದವು.
ಹೊನಲು ಬೆಳಕಿನಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ
ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ ಇರಲಿಲ್ಲ. ಬದಲಾಗಿ ಲೀಗ್ ಮಾದರಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ತಂಡವನ್ನು ಆಯ್ಕೆ ಮಾಡಲಾಯಿತು. ಐದು ಪಂದ್ಯಗಳಲ್ಲಿ ಜಯಗಳಿಸಿ ಹೆಚ್ಚು ಅಂಕ ಪಡೆಯುವುದರೊಂದಿಗೆ ಆಳ್ವಾಸ್ ಕಾಲೇಜು ಮೂಡಬಿದಿರೆ ಮೊದಲ ಸ್ಥಾನಗಳಿಸಿತು. ದ್ವಿತೀಯ ಸ್ಥಾನ ಎಸ್.ಡಿ.ಎಮ್. ಕಾಲೇಜು ಉಜಿರೆ, ತೃತೀಯ ಸ್ಥಾನ ಶಾರದಾ ಕಾಲೇಜು ತಲಪಾಡಿ ಹಾಗೂ ಚತುರ್ಥ ಸ್ಥಾನ ತೆಂಕನಿಡಿಯೂರು ಕಾಲೇಜು ಉಡುಪಿ ತಂಡಗಳು ಪಡೆದುಕೊಂಡಿತ್ತು.
ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭದಲ್ಲಿ ಯುವಕ ಮಂಡಲದ ಅಧ್ಯಕ್ಷ ಜಯಪ್ರಸಾದ್ ಕಾರಿಂಜ ಅಧ್ಯಕ್ಷತೆ ವಹಿಸಿದ್ದರು. ಪಂದ್ಯಾಟದ ಪ್ರಥಮ ಬಹುಮಾನವಾಗಿ ರೂ.12,000 ನಗದು, ದ್ವಿತೀಯ ರೂ.8000 ನಗದು, ತೃತೀಯ ರೂ .6000 ನಗದು, ಚತುರ್ಥ ರೂ.4000 ನಗದು, ಹಾಗೂ ವೈಯುಕ್ತಿಕ ಬಹುಮಾನ ನೀಡಲಾಯಿತು. ಮುಖ್ಯ ಅತಿಥಿಗಳಾಗಿ ನಗದು ಬಹುಮಾನ ನೀಡಿ ಸಹಕರಿಸಿದ ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ನಾರಾಯಣ ಬೊಮ್ಮೆಟ್ಟಿ, ಜಾಲ್ಸೂರು ಸ್ಕಂದಶ್ರೀ ಅರ್ಥ್ ಮೂವರ್ಸ್ ಮಾಲಕ ಗಣೇಶ್ ಕೋಳ್ತಿಮಾರ್, ಪಿ.ಡಬ್ಲ್ಯೂಡಿ ಗುತ್ತಿಗೆದಾರ ಅವಿನ್ ಮಳಿ ಹಾಗೂ ಪಂದ್ಯಾಕೂಟದ ನಿರ್ಣಾಯಕರಾದ ಮೋನಪ್ಪ ಪಟ್ಟೆ ಉಪಸ್ಥಿತರಿದ್ದರು.
ಭಾಗವಹಿಸಿದ್ದ ತಂಡಗಳು:
ಹೊನಲು ಬೆಳಕಿನಲ್ಲಿ ನಡೆದ ಈ ವಾಲಿಬಾಲ್ ಪಂದ್ಯಾವಳಿಯಲ್ಲಿ
ಎಸ್.ಡಿ.ಎಂ. ಕಾಲೇಜ್ ಉಜಿರೆಯ ಕೆ.ಕೆ. ಬ್ರದರ್ ತಂಡಕ್ಕೆ ಗ್ರಾ.ಪಂ. ಸದಸ್ಯ ರವಿಚಂದ್ರ ಕಾಪಿಲ ಮತ್ತು ಲೋಹಿತ್ ಕುಮಾರ್ ಕುದ್ಕುಳಿ ಪ್ರಾಯೋಜಕರಾಗಿದ್ದರು.
ಶಾರದಾ ಕಾಲೇಜು, ತಲಪಾಡಿ ಮಂಗಳೂರು ಇದರ ರೈಡರ್ ಕನಕಮಜಲು ತಂಡಕ್ಕೆ, ಸಂತೋಷ್ ಕುಮಾರ್ ಪಡ್ರೆ ಮತ್ತು ಸತೀಶ್ ಬೊಮ್ಮೆಟ್ಟಿ ಪ್ರಾಯೋಜಕರಾಗಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ಫೆಂಡ್ಸ್ ಕನಕಮಜಲು ತಂಡಕ್ಕೆ ಚೇತನ್ ನೆಡೀಲು , ನಿತೇಶ್, ಕಿರಣ್ ಕಚೆಗದ್ದೆ ಮತ್ತು ಜಗದೀಶ್ ಮಾಣಿ ಕೋಡಿ ಪ್ರಾಯೋಜಕರಾಗಿದ್ದರು.
ತೆಂಕನಿಡಿಯೂರು ಕಾಲೇಜು ಉಡುಪಿಯ ಕನ್ನಿಕಾ ಟೈಗರ್ ತಂಡಕ್ಕೆ ಕಿಶೋರ್ ದೇವರಗುಂಡ ಪ್ರಾಯೋಜಕರಾಗಿದ್ದರು.
ಬ್ಯಾರೀಸ್ ಕಾಲೇಜು ಕೋಡಿ ಕುಂದಾಪುರ ಇದರ ಸಕ್ಸಸ್ ಸುಣ್ಣಮೂಲೆ ತಂಡ, ಹಸನ್ ಗೌಫೀಯಾ ಸುಣ್ಣಮೂಲೆ ಮತ್ತು ಮಹಮ್ಮದ್ ಜುನೈದ್ ಕೆ.ಎಂ. ಪ್ರಾಯೋಜಕರಾಗಿದ್ದರು.
ಆಳ್ವಾಸ್ ಕಾಲೇಜು ಮೂಡಬಿದಿರೆ ಇದರ ಯುವಕ ಮಂಡಲ (ರಿ.) ಕನಕಮಜಲು ತಂಡಕ್ಕೆ ಬಾಲಚಂದ್ರ ಪಡ್ರೆ ಮತ್ತು ಜಯಪ್ರಸಾದ್ ಕಾರಿಂಜ ಪ್ರಾಯೋಜಕರಾಗಿದ್ದರು.
ಅಗಲಿದ ಹಾಜಿ ಬೀರಾಮೊಯ್ದಿನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ
ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮಾ.10ರಂದು ಬೆಳಿಗ್ಗೆ ನಿಧನರಾದ
ಕನಕಮಜಲು ಗ್ರಾಮದ ಹಿರಿಯ ಸಹಕಾರಿ ಧುರೀಣ, ಕನಕಮಜಲು ಗ್ರಾಮ ಪಂಚಾಯತಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಹಾಜಿ ಬೀರಾಮೊಯ್ದಿನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.