ಜಾಲ್ಸೂರು ಗ್ರಾಮದ ಮಾಪಳಡ್ಕದ ದರ್ಗಾ ಶರೀಫ್ ನಲ್ಲಿ ಮಖಾಂ ಉರೂಸ್ ಕಾರ್ಯಕ್ರಮ ಮಾ.20, 21 ಮತ್ತು 22 ರಂದು ನಡೆಯಲಿದೆ ಎಂದು ಮಸೀದಿಯ ಹಾಫಿಲ್ ಅಬ್ದುಲ್ ಸಲಾಂ ನಿಝಾಮಿ ಹೇಳಿದರು.
ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕಾರ್ಯಕ್ರಮ ದ ವಿವರ ನೀಡಿದರು.
ಜಾಲ್ಲೂರು ಸಮೀಪದ ಮಾಪಳಡ್ಕದಲ್ಲಿ ಜಾತಿ ಧರ್ಮ ಮತ ಬೇದಭಾವಗಳಿಗೆ ಅತೀತವಾಗಿ ಸರ್ವ ಧರ್ಮೀಯರ ಸೌಹಾರ್ದ ತಾಣ ಹಾಗೂ ಸಮಸ್ಯೆ ಸಂಕಷ್ಟ ಗಳ ಪರಿಹಾರ ಕೇಂದ್ರವಾಗಿರುವ ಮಾಪಳಡ್ಕ ಮಖಾಂ ಶರೀಫ್ ನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರವ ಸಜ್ಜನ ಸಾತ್ವಿಕ ಔಲಿಯಾ ಶ್ರೇಷ್ಠರ ಸ್ಮರಣಾರ್ಥವಾಗಿ ವರ್ಷಂಪ್ರತೀ ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮ ಮಾರ್ಚ್ 20, 21, 22 ರಂದು ನಡೆಯಲಿದೆ.
ಮಾ. 20 ರಂದು ಕಾರ್ಯಕ್ರಮಗಳ ಅಧಿಕೃತ ಚಾಲನೆ ನಡೆಯಲಿದ್ದು ಅಂದು ರಾತ್ರಿ ಇಶಾ ನಮಾಜಿನ ಬಳಿಕ ಬಹು ಸಯ್ಯದ್ ಪೂಕುಂಜ್ಞೆ ತಂಜಲ್ ಆದೂರು ಪ್ರಾರ್ಥನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದು , ಬಹು ಲುಕ್ ಮಾನುಲ್ ಹಕೀಂ ಸಖಾಫಿ ಪುಲ್ಲಾರ . ಕೇರಳ ಮುಖ್ಯ ಭಾಷಣ ಮಾಡಲಿದ್ದಾರೆ .
ಮಾ. 21ರಂದು ರಾತ್ರಿ ಮಗ್ರಿಬ್ ನಮಾಜಿನ ಬಳಿಕ ದಿಕ್ಸ್ ಹಾಗೂ ಹರಕೆ ಕಾರ್ಯಕ್ರಮ ನಡೆಯಲಿದ್ದು ಇಶಾ ನಮಾಜಿನ ಇರುವಂಬಳ್ಳ ಜಮಾಅತ್ ಗೌರವಾಧ್ಯಕ್ಷರಾದ ಬಹು ಸಂಕೇಶ್ ಇಬ್ರಾಹೀಮ್ ಹಾಜಿಯವರ ಅಧ್ಯಕ್ಷತೆಯಲ್ಲಿ ಸಯ್ಯದ್ ರೈನುಲ್ ಆಬಿದೀನ್ ತಂಜಲ್ ದುಗ್ಗಲಡ್ಕ ರವರು ಪ್ರಾರ್ಥನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದು , ಬಹು ನವಾಝ್ ಮನ್ನಾನಿ ಕೊಲ್ಲಂ ಕೇರಳ ಮುಖ್ಯ ಭಾಷಣ ಮಾಡಲಿದ್ದಾರೆ.
ಮಾ.22 ರಂದು ರಾತ್ರಿ ಉರೂಸಿನ ಸಮಾರೋಪ ಸಮಾರಂಭ ನಡೆಯಲಿದ್ದು ಮಗ್ರಿಬ್ ನಮಾಜಿನ ಬಳಿಕ ಮೌಲಿದ್ ಕಾರ್ಯಕ್ರಮ ಹಾಗೂ ಇಶಾ ನಮಾಜಿನ ಬಳಿಕ ಬಹು ಇರುವಂಬಳ್ಳ ಜಮಾಅತ್ ಅಧ್ಯಕ್ಷ ಎ.ಬಿ ಅಶ್ರಫ್ ಸಅದಿಯವರ ಅಧ್ಯಕ್ಷತೆಯಲ್ಲಿ ಬಹು ಸಯ್ಯದ್ ಸುಹೈಲ್ ತಂಜಲ್ ಮಡಕ್ಕರ ಕೇರಳ ಪ್ರಾರ್ಥನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದು ಬಹು ಪೇರೋಡು ಮುಹಮ್ಮದ್ ಅಝ್ ಹರಿ ಮುಖ್ಯ ಭಾಷಣ ಮಾಡಲಿದ್ದಾರೆ . ಮಾಪಳಡ್ಕ ಮುದರ್ರಿಸ್ ಹಾಫಿಲ್ ಅಬ್ದುಸ್ಸಲಾಂ ನಿಝಾಮಿ , ಇರುವಂಬಳ್ಳ ಖತೀಬ್ ಹಸೈನಾರ್ ಸಅದಿ , ಝುಬೈರ್ ಅನಿ ಪಳ್ಳತ್ತೂರು , ಸಿ.ಕೆ ಅಬ್ದುಲ್ಲಾ ಹಾಮಿದಿ , ಹಸೈನಾರ್ ಬಾಹಸನಿ ಹಾಗೂ ಇನ್ನಿತರ ಹಲವಾರು ಸುಪ್ರಸಿದ್ದ ಉಲಮಾ ಉಮರಾ ಸಾದಾತ್ ಗಳು ಆಗಮಿಸಲಿದ್ದಾರೆ . ಈ ಮೂರು ದಿನಗಳ ಕಾರ್ಯಕ್ರಮಗಳಲ್ಲಿ ಕೋವಿಡ್ 19 ನೀತಿ ನಿಯಮಗಳಿಗೆ ಬದ್ಧವಾಗಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಲು ಹಾಗೂ ಕಾಣಿಕೆ ಇತ್ಯಾದಿಗಳನ್ನು ಉರೂಸಿಗೆ ಮುಂಚಿತವಾಗಿ ನೀಡಬಹುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಮಾಅತ್ ಅಧ್ಯಕ್ಷ ಎ.ಬಿ ಅಶ್ರಫ್ ಸಅದಿ , ಜಮಾಅತ್ ಕಾರ್ಯದರ್ಶಿ ಟಿ , ಹೆಚ್ ಮುಹಮ್ಮದ್ ಕುಂಞ್ಚ ತುಪ್ಪಕಲ್ , ಉಪಾಧ್ಯಕ್ಷ ಹಸೈನಾರ್ ದರ್ಮತನ್ನಿ , ಕೋಶಾಧಿಕಾರಿ ಬೀರಾನ್ ಹಾಜಿ ಭಾಗವಹಿಸಿದರು .