ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಯೇನೆಕಲ್ಲು ಇದರ ವಾರ್ಷಿಕ ಜಾತ್ರಾ ಮಹೋತ್ಸವವು ಮಾ. 27 ರಂದು ಆರಂಭಗೊಂಡಿದ್ದು ಏ 2ರ ತನಕ ಜರಗಲಿದೆ. ಮಾ. 24ರಂದು ಪೂರ್ವ ನಿಶ್ಚಿತ ಗೊನೆ ಕಡಿಯುವ ಕಾರ್ಯ ನಡೆಯಿತು. ಮಾ. 27ರಂದು ಸಂಜೆ ಭಜನೆ, ಬಳಿಕ ರಂಗಪೂಜೆ, ಶ್ರೀ ಭೂತಬಲಿ ಉತ್ಸವ, ವಸಂತಕಟ್ಟೆ ಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಜರಗಿತು. ಮಾ. 28ರಂದು ಪೂರ್ವಾಹ್ನ ವಿವಿಧ ವೈದಿಕ ಕಾರ್ಯಗಳೊಂದಿಗೆ ಶ್ರೀ ದೇವರ ಬಲಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಮಾ. 29ರಂದು ಶ್ರೀ ಉಳ್ಳಾಕುಲು, ಉಳ್ಳಾಳ್ತಿ, ಬಚ್ಚನಾಯಕ, ಕೋಟಿನಾಯಕ ದೈವಸ್ಥಾನದಲ್ಲಿ ಸಂಜೆ 6.30 ಕ್ಕೆ ಉಗ್ರಾಣ ತುಂಬಿಸುವುದು, ತೋರಣ ಮುಹೂರ್ತ, ಬಳಿಕ ಉಳ್ಳಾಕುಲು ವಗೈರೆ ದೈವಗಳ ನೇಮೋತ್ಸವ ನಡೆಯಲಿದೆ. ಮಾ. 30ರಂದು ರಾತ್ರಿ 8.00 ಗಂಟೆಯಿಂದ ಉಳ್ಳಾಳ್ತಿ ವಗೈರೆ ದೈವಗಳ ನೇಮ ನಡೆಯಲಿದೆ. ಮಾ. 31ರಂದು ರಾತ್ರಿ 7.00 ಗಂಟೆಗೆ ಉಡ್ಡೋತ್ತಾರು – ಕುಮಾರ ದೈವಗಳ ಭಂಡಾರ ಬಂದು ನೇಮೋತ್ಸವ ನಡೆಯಲಿದೆ. ಏ. 1ರಂದು ಬೆಳಿಗ್ಗೆ 6.00 ಗಂಟೆಯಿಂದ ಶ್ರೀ ಬಚ್ಚನಾಯಕ ದೈವದ ನೇಮ, ಬಳಿಕ ಕೋಟಿನಾಯಕ ದೈವದ ನೇಮ ನಡೆಯಲಿದೆ. ರಾತ್ರಿ ಪ್ರಧಾನಿ ವಗೈರೆ ದೈವದ ನೇಮ ನಡೆಯಲಿದೆ. ಏ. 2ರಂದು ರಾತ್ರಿ 8.00 ಗಂಟೆಯಿಂದ ಗುಳಿಗ ದೈವದ ನೇಮ ನಡೆಯಲಿದೆ.