ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಗೂನಡ್ಕ , ಸಂಪಾಜೆ ಇದರ ವತಿಯಿಂದ ಹೊರ ತರಲಾದ ಪುರವಣಿ ಸಜ್ಜನ ವಾಣಿ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ವೈಟ್ ಪೀಲ್ಡ್ ಪೋರ್ಚುನ್ ಸಭಾಂಗಣದಲ್ಲಿ ನಡೆಯಿತು.
ಬಿಇಎಂಎಲ್ ನಿವೃತ್ತ ಮಾನವ ಸಂಪನ್ಮೂಲ ಕಾರ್ಯವಾಹಕ ನಿರ್ದೇಶಕರಾದ ಹಸನಬ್ಬ ಸಜ್ಜನ ವಾಣಿ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಜ್ಜನ ಪ್ರತಿಷ್ಠಾನದ ಬೀಜದಕಟ್ಟೆ ಅಧ್ಯಕ್ಷರಾದ ಡಾ.ಉಮ್ಮರ್ ಬೀಜದಕಟ್ಟೆಯವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎ.ಎ ಪಾಟ್ನರ್ಸ್ ಹಿರಿಯ ನ್ಯಾಯವಾದಿ ಮಂಜುನಾಥ್ ಬಿ , ಹಿರಿಯ ಮಾನವ ಸಂಪನ್ಮೂಲ ಅಧಿಕಾರಿ ಇಸ್ಮಾಯಿಲ್ ಜಾರ, ಅತಿಥಿಗಳಾಗಿ ಭಾ
ಗವಹಿಸಿದ್ದರು.
ಸಾಸ್ಮೋಸ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ರಾಜಶೇಖರ ರೈಯವರು ಸಜ್ಜನ ಬಿಡುಗಡೆಗೊಳಿಸಿದರು.
ಬೆಂಗಳೂರು ನಿರಾತಂಕ ಸಂಸ್ಥೆಯ ಎಂ.ಹೆಚ್ ರಮೇಶ್,ಇಂಟರ್ ಪ್ಲೆಕ್ಸ್ ಎಲೆಕ್ಟ್ರಾನಿಕ್ ಹೆಚ್ .ಆರ್. ಮುಖ್ಯಸ್ಥ ವಾಸು, ಬೆಂಗಳೂರು ವೆರ್ ಹೌಸಿಂಗ್ ಪ್ರೈವೇ ಮುಖ್ಯಸ್ಥ ಜೈಪ್ರಕಾಶ್, ಲಗೂನ ಕ್ಲೋತಿಂಗ್ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಸದಾಶಿವ , ಬಿಎಫ್ಎ ಅಧ್ಯಕ್ಷ ಶ್ರೀ ನಟರಾಜ್ ,ಪ್ರಧಾನ ಕಾರ್ಯದರ್ಶಿ ಅಶ್ರಫ್ ಟರ್ಲಿ
ಬಿಇಎಂಎಲ್ ಮೈಸೂರು ಮಾನವ ಸಂಪನ್ಮೂಲ ಅಧಿಕಾರಿ ಆಸೀಫ್ ಎಲಿಮಲೆ, ಮೊದಲಾದವರು ಉಪಸ್ಥಿತರಿದ್ದರು. ಅಲ್ಡ್ರೀನ್ ಡಿಸೋಜ ಸ್ವಾಗತಿಸಿ ತಶ್ರೀಫ ಟರ್ಲಿ ವಂದಿಸಿದರು. ಮಂಜುನಾಥ್ ಹಿರಿಯೂರ್, ಮಾಝೀನ್ ಬೀಜದಕಟ್ಟೆ ಕಾರ್ಯಕ್ರಮದಲ್ಲಿ ಸಹಕರಿಸಿದರು.