ಮಂಡ್ಯದ ಗುರುದೇವ ಲಲಿತಕಲಾ ಅಕಾಡೆಮಿಯ ನಿರ್ದೇಶಕಿ ಡಾ.ಚೇತನಾ ರಾಧಾಕೃಷ್ಣ ಮೂರ್ಜೆ ಅವರಿಗೆ ‘ಹೊಯ್ಸಳ ಚಕ್ರೇಶ್ವರಿ ನಾಟ್ಯರಾಣಿ ಶಾಂತಲಾ’ ಪ್ರಶಸ್ತಿಯನ್ನು ಎ.7ರಂದು ಪ್ರದಾನ ಮಾಡಲಾಯಿತು.
ಮಂಡ್ಯದ ಕದಂಬಸೇನಾ ಕರ್ನಾಟಕ ಸಂಘದ ವತಿಯಿಂದ ಕೊಡಮಾಡುವ ಈ ಪ್ರಶಸ್ತಿಯನ್ನು ಎ. ೭ರಂದು ಪ್ರದಾನ ಮಾಡಲಾಯಿತು. ಡಾ.ಚೇತನಾ ರಾಧಾಕೃಷ್ಣರವರು ಕನಕಮಜಲಿನ ರಾಧಾಕೃಷ್ಣ ಮೂರ್ಜೆಯವರ ಪತ್ನಿ.
ಈ ದಂಪತಿ ಮಂಡ್ಯದಲ್ಲಿ ಸಾಂಸ್ಕೃತಿಕ ಕಲಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಗುರುದೇವ ಲಲಿತ ಕಲಾ ಅಕಾಡೆಮಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.