ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಪ್ರಯುಕ್ತ ಮುಂಬರುವ ಆ.15ರಂದು ಪ್ರತೀ ಮನೆ ಮನೆಗಳಲ್ಲಿ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವನ್ನು ಹಬ್ಬವನ್ನಾಗಿ ಆಚರಿಸುವ ನಿಟ್ಟಿನಲ್ಲಿ ಸುದ್ದಿ ಸ್ವಾತಂತ್ರ್ಯ ರಥವು ಇಂದು ಹರಿಹರ ಪಲ್ಲತ್ತಡ್ಕಕ್ಕೆ ಆಗಮಿಸಿದಾಗ ಗ್ರಾಮಸ್ಥರು ಸ್ವಾಗತಿಸಿದರು.
ಸುದ್ದಿ ಚಾನೆಲ್ ವಿಭಾಗದ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಅವರು ಮಾತನಾಡಿ ಗ್ರಾಮದ ಪ್ರತೀ ಮನೆ ಮನೆಗಳಲ್ಲಿ ಆ.15ರಂದು ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವವನ್ನು ಹಬ್ಬದ ರೀತಿಯಲ್ಲಿ ಆಚರಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಶ್ರೀಧರ ಭಾಗವತ್ ಕಜ್ಜೋಡಿ, ರಾಮಚಂದ್ರ ಪಳಂಗಾಯ, ಎ.ಎಲ್. ಲಕ್ಷ್ಮೀನಾರಾಯಣ, ರಾಜೇಶ್ ಪಿ.ಎಸ್., ಮಾಧವ ಕೊಲ್ಲಮೊಗ್ರ, ದಯಾನಂದ ಪಿ.ಎಸ್. ಮಧುಸೂದನ್ ಕಾಪಿಕಾಡು, ಮೋಹನ್ ದಾಸ್ ದೊಡ್ಡಕಜೆ, ಮಹಾಬಲೇಶ್ವರ ಕೆ., ಕೃಷ್ಣ ಪ್ರಸನ್ನ, ಧರ್ಮಪಾಲ ಗೌಡ ಮುಚ್ಚಾರ, ಸುದ್ದಿ ಪತ್ರಿಕೆಯ ಜಾಹೀರಾತು ವಿಭಾಗದ ಮುಖ್ಯಸ್ಥ ರಮೇಶ್ ನೀರಬಿದಿರೆ, ವರದಿಗಾರರಾದ ಶಿವರಾಮ ಕಜೆಮೂಲೆ, ದಯಾನಂದ ಕೊರತ್ತೋಡಿ, ಜಯಶ್ರೀ ಕೊಯಿಂಗೋಡಿ, ಸುದ್ದಿ ಪ್ರತಿನಿಧಿ ಕುಶಾಲಪ್ಪ ಕಾಮತುಕುಮೇರಿ ಉಪಸ್ಥಿತರಿದ್ದರು.