ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಪ್ರಯುಕ್ತ ಮುಂಬರುವ ಆ.15ರಂದು ಪ್ರತೀ ಮನೆ ಮನೆಗಳಲ್ಲಿ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವನ್ನು ಹಬ್ಬವನ್ನಾಗಿ ಆಚರಿಸುವ ನಿಟ್ಟಿನಲ್ಲಿ ಸುದ್ದಿ ಸ್ವಾತಂತ್ರ್ಯ ರಥವು ಇಂದು ಹಳೆಗೇಟು ಗೆ ಆಗಮಿಸಿದಾಗ ಸ್ಥಳೀಯರು ಸ್ವಾಗತಿಸಿದರು.
ಸುದ್ದಿ ಪತ್ರಿಕೆಯ ಜಾಹೀರಾತು ವಿಭಾಗದ ಮುಖ್ಯಸ್ಥ ರಮೇಶ್ ನೀರಬಿದಿರೆ ಮಾತನಾಡಿ ಗ್ರಾಮದ ಪ್ರತೀ ಮನೆ ಮನೆಗಳಲ್ಲಿ ಆ.15ರಂದು ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವವನ್ನು ಹಬ್ಬದ ರೀತಿಯಲ್ಲಿ ಆಚರಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಹಳೆಗೇಟು ಶ್ರೀ ಎಂಟರ್ ಪ್ರೈಸಸ್ ನ ಮಾಲಕ ಮೋಹನ್ , ಸ್ಥಳೀಯರಾದ ಸಿನಾನ್ , ಅಬ್ಬಾಸ್ ಪೈಚಾರು, ಅಶ್ರಪ್ , ಮಹಮದ್, ಸೋಮಶೇಖರ, ಸಚಿನ್ , ಚನ್ನಕೇಶವ, ಹಾರಿಸ್ ,ಅಂಜನ್, ವಿನಯ್ ಕುಮಾರ್, ಸಂತೋಷ್, ಬಿಂದ್ಯಾ ಹಾಗೂ ಸುದ್ದಿ ವರದಿಗಾರರಾದ ಶರೀಪ್ ಜಟ್ಟಿಪ ಳ್ಳ , ಹಸೈನಾರ್ ಜಯನಗರ , ಸುದ್ದಿ ಚಾನೆಲ್ ನ ಜಾಹೀರಾತು ವಿಭಾಗದ ಪೂಜಾ ಶ್ರೀ ವಿತೇಶ್ ಕೋಡಿ ಉಪಸ್ಥಿತರಿದ್ದರು.