ಅಕಾಡೆಮಿ ಆಫ್ ಲಿಬರಲ್ಎಜ್ಯುಕೇಶನ್ ಇದರ ಪ್ರಧಾನ ಕಾರ್ಯದರ್ಶಿಗಳಾದ ಡಾ. ರೇಣುಕಾ ಪ್ರಸಾದ್ ಅವರ ಆಡಳಿತದ ಅಡಿಯಲ್ಲಿಕಾರ್ಯನಿರ್ವಹಿಸುತ್ತಿರುವ ಕೆ.ವಿ.ಜಿ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಇದರ ನೂತನ ನಿರ್ದೇಶಕರಾಗಿ ಕೆ.ವಿ.ಜಿ ದಂತ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಮನೋಜ್ಕುಮಾರ್ ಅಡ್ಡಂತಡ್ಕರವರನ್ನು ಆಯ್ಕೆ ಮಾಡಲಾಯಿತು.
ಜುಲೈ ೨೧ರಂದು ನಡೆದ ಸಹಕಾರಿಯ ಮಾಸಿಕ ಸಭೆಯಲ್ಲಿ ನೂತನ ನಿರ್ದೇಶಕರಿಗೆ ಅಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ಅವರು ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ಊರುಬೈಲು ಸಹಕಾರಿಯ ನಿರ್ದೇಶಕರುಗಳಾದ ಭವಾನಿ ಶಂಕರ ಅಡ್ತಲೆ, ಪ್ರಸನ್ನ ಕಲ್ಲಾಜೆ, ದಯಾನಂದ ಅಟ್ಲೂರು, ನಾಗೇಶ್ಕೊಚ್ಚಿ ಮತ್ತು ಸಹಕಾರಿಯ ಹಿರಿಯ ವ್ಯವಸ್ಥಾಪಕರಾದ ಅಂಕುಶ್ ಕುದ್ವ ಸಿಬ್ಬಂದಿಗಳಾದ ಅಶ್ವತ್, ಕರುಣಾಕರ ಮತ್ತು ಉದಯಕುಮಾರ್ ಉಪಸ್ಥಿತರಿದ್ದರು.