ಮುಳ್ಯ ಅಟ್ಲೂರು, ಕಾಂತಮಂಗಲ ಬಿಜೆಪಿ ಬೂತ್ ಸಮಿತಿ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆ
ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ, ನ್ಯಾಯ ಸಿಗದ ಹಿನ್ನಲೆಯಲ್ಲಿ ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರು ಹಾಗೂ ಕಾಂತಮಂಗಲ ಬಿಜೆಪಿ ಬೂತ್ ಸಮಿತಿ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆಯನ್ನು ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿಯವರಿಗೆ ಸಲ್ಲಿಸುತ್ತಿರುವುದಾಗಿ ಮುಳ್ಯ ಅಟ್ಲೂರು ಬೂತ್ ಸಮಿತಿಯ ತಾರನಾಥ ಮುಳ್ಯ, ಕಾಂತಮಂಗಲ ಬೂತ್ ಸಮಿತಿಯ ಹರ್ಷಿತ್ ದೊಡ್ಡೇರಿ ತಿಳಿಸಿದ್ದಾರೆ.