ಇಂದು ಮಧ್ಯಾಹ್ನ ಎರಡು ಗಂಟೆಯ ಸಮಯದಲ್ಲಿ ಕೆಲವು ಹಿಂದೂ ಸಂಘಟನೆಗಳ ಯುವಕರ ತಂಡ ಗುತ್ತಿಗಾರು ಕೆನರಾ ಬ್ಯಾಂಕ್ ಬಳಿ ಇರುವ ನ್ಯೂ ಸ್ಟಾರ್ ಬೇಕರಿ ಬಳಿ ತೆರಳಿ ಬೇಕರಿ ಮಾಲಕ ಬಶೀರ್ ರವರಿಗೆ ಅಂಗಡಿ ಬಂದ್ ಮಾಡಲು ಹೇಳಿರುತ್ತಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಬಶೀರ್ರವರು ಅಂಗಡಿ ಶಟರ್ ಬಂದು ಮಾಡಲು ತಿರುಗಿದಾಗ ಬಂದವರ ಪೈಕಿಯವರು ಬಷೀರ್ ರವರ ತಲೆಗೆ ಯಾವುದೋ ಗಟ್ಟಿಯಾದ ವಸ್ತುವಿನಿಂದ ಹೊಡೆದಿದ್ದಾರೆ ಎನ್ನಲಾಗಿದೆ.
ಆ ಸಂದರ್ಭದಲ್ಲಿ ಅವರ ತಲೆ ತಿರುಗಿ ಅಸ್ವಸ್ಥರಾಗಿ ಅಲ್ಲಿಂದ ತಪ್ಪಿಸಿ ಜೀವಭಯದಿಂದ ಓಡಿ ಗುತ್ತಿಗಾರು ಮಸೀದಿ ಬಳಿ ಬಿದ್ದಿದ್ದು ಇದನ್ನು ನೋಡಿದ ಸ್ಥಳೀಯರು ಬಂದು ತಲೆಯಿಂದ ರಕ್ತ ಸೋರುತಿರುವುದನ್ನು ಕಂಡು ಪ್ರಥಮ ಚಿಕಿತ್ಸೆ ಮಾಡಿ ನಂತರ ಆಂಬುಲೆನ್ಸ್ ಮೂಲಕ ಸುಳ್ಯ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.