ಪಡ್ಪು ಶ್ರೀರಕ್ಷಾ ಸ್ವಸಹಾಯ ಸಂಘ ಇದರ ವಾರ್ಷಿಕ ಮಹಾಸಭೆ

0

 

 

ನಾಗರಿಕ ಸೇವಾ ಟ್ರಸ್ಟ್ ಗುರುವಾಯನಕೆರೆ ಪ್ರವರ್ತಿತ ಪಡ್ಪು ಶ್ರೀರಕ್ಷಾ ಸ್ವಸಹಾಯ ಸಂಘ ಬೆಳ್ಳಾರೆ ಇದರ 21 ನೇ ವರ್ಷದ ವಾರ್ಷಿಕ ಮಹಾಸಭೆ ಜು. 31ರಂದು ಪಡ್ಪು ಪೂರ್ಣಿಮ ಮನೆ ವಠಾರದಲ್ಲಿ ನಡೆಯಿತು. ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ತುಳಸಿ ಕಿಲಂಗೋಡಿ ವಹಿಸಿದ್ದರು.

 

 

ವಾರ್ಷಿಕ ಲೆಕ್ಕಪತ್ರ ಹಾಗೂ ವರದಿಯನ್ನು ಕಾರ್ಯದರ್ಶಿ ಕುಸುಮ ಕುರುಂಬುಡೇಲು ಸಭೆಗೆ ಮಂಡಿಸಿ ಅನುಮೋದನೆ ಪಡೆಯಲಾಯಿತು. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ದೈಹಿಕ ಶಿಕ್ಷಣ ಶಿಕ್ಷಕರಾದ ಕೊರಗಪ್ಪ ಕುರುಂಬುಡೇಲು, ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಕೋಶಾಧಿಕಾರಿ ಆನಂದ ಗೌಡ ಪಡ್ಪುಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು. ನಂತರ 2022- 23 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆದು ಅಧ್ಯಕ್ಷರಾಗಿ ಶೋಭಾನ ಪನ್ನೆ, ಕಾರ್ಯದರ್ಶಿಯಾಗಿ ಸವಿತ ಬಸ್ತಿಗುಡ್ಡೆ ಆಯ್ಕೆಯಾದರು. ಸವಿತಾ ಬಸ್ತಿಗುಡ್ಡೆ ಸ್ವಾಗತಿಸಿ, ಪುಷ್ಪಾವತಿ ಕುರುಂಬುಡೇಲು ವಂದಿಸಿದರು. ಮೀನಾಕ್ಷಿ ಪನ್ನೆ ಕಾರ್ಯಕ್ರಮ ನಿರೂಪಿಸಿದರು.