ಮುರುಳ್ಯ ಗ್ರಾಮದ ಶಾಂತಿನಗರ ದಿ.ಗುರುವರವರ ಪತ್ನಿ ಶ್ರೀಮತಿ ಕೊರಗ್ಗುರವರು ಅಲ್ಪಕಾಲದ ಅಸೌಖ್ಯದಿಂದ ಆ.11 ರಂದು ನಿಧನರಾದರು.
ಅವರಿಗೆ 75 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಮುತ್ತಪ್ಪ, ಕೆಎಸ್ಆರ್ ಟಿಸಿಯ ಟ್ರಾಫಿಕ್ ಕಂಟ್ರೋಲರ್ ಸುಭಾಷ್, ಪುತ್ರಿಯರಾದ ಶ್ರೀಮತಿ ಲಲಿತಾ ಬಾಬು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಭಾಗೀರಥಿ ಮುರುಳ್ಯ, ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಕು. ಜಾನಕಿ ಮುರುಳ್ಯ, ಅಳಿಯ ಶಿಕ್ಷಕ ಬಾಬು ಪೆರುವಾಜೆ, ಮೊಮ್ಮಕ್ಕಳು,ಕುಟುಂಬಸ್ಥರು, ಬಂಧುಬಳಗವನ್ನು ಅಗಲಿದ್ದಾರೆ.