ದುಗ್ಗಲಡ್ಕ: ಕೊಯಿಕುಳಿ ಶಾಲೆಯಲ್ಲಿ ಧ್ವಜಾರೋಹಣ ಮತ್ತು ಮಾನವ ಸರಪಳಿ

0

 

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದುಗ್ಗಲಡ್ಕ ಕೊಯಿಕುಳಿ ಸ‌.ಹಿ.ಪ್ರಾ.ಶಾಲೆಯಲ್ಲಿ ಧ್ವಜಾರೋಹಣ ಮತ್ತು ಮಾನವ ಸರಪಳಿ ಮಾಡಲಾಯಿತು.
ಸುಳ್ಯ ನಗರ ಪಂಚಾಯತ್ ಸದಸ್ಯ ಬಾಲಕೃಷ್ಣ ರೈ ದುಗ್ಗಲಡ್ಕ, ಮಾಜಿ ಅಧ್ಯಕ್ಷೆ ಶ್ರೀಮತಿ ಶೀಲಾವತಿ ಮಾಧವ, ಮುಖ್ಯ ಶಿಕ್ಷಕ ಮಾಧವ ಮೂಕಮಲೆ ಹಾಗೂ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ.ಪದಾಧಿಕಾರಿಗಳು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದರು. ಧ್ವಜಾರೋಹಣದ ನಡೆದ ಬಳಿಕ ಘೋಷಣೆಗಳೊಂದಿಗೆ ಮಾನವ ಸರಪಳಿ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಿದರು.