ಜಾಲ್ಸೂರು: ಮಹಾಬಲಡ್ಕ ಕಾಂಪ್ಲೆಕ್ಸ್ ವಠಾರದಲ್ಲಿ ಅಮೃತ ಸ್ವಾತಂತ್ರ್ಯೋತ್ಸವ ಆಚರಣೆ

0

ಜಾಲ್ಸೂರಿನ ಮಹಾಬಲಡ್ಕ ಕಾಂಪ್ಲೆಕ್ಸ್ ವಠಾರದಲ್ಲಿ 75ನೇ ವರ್ಷದ ಅಮೃತ ಸ್ವಾತಂತ್ರ್ಯೋತ್ಸವವನ್ನು ಆ.15ರಂದು ಆಚರಿಸಲಾಯಿತು.
ನಿವೃತ್ತ ಸಬ್ ಇನ್ಸ್ ಪೆಕ್ಟರ್ ಎಲ್ಯಣ್ಣ ಗೌಡರು ಧ್ವಜಾರೋಹಣ ನೆರವೇರಿಸಿ, ಶುಭಹಾರೈಸಿದರು.


ಈ ಸಂದರ್ಭದಲ್ಲಿ ಜಾಲ್ಸೂರಿನ ವರ್ತಕರುಗಳು, ಸ್ಥಳೀಯ ರಿಕ್ಷಾ ಚಾಲಕ – ಮಾಲಕರು, ಸ್ಥಳೀಯರಾದ ಜಿ. ಎಂ. ಮಹಮ್ಮದ್ ಕುಂಞಿ , ಶ್ರೀ ಕೃಷ್ಣ ಭಟ್ ಉಮೇಶ್. ಪಿ. ಜಿ. ಹರೀಶ, ಶ್ರೀವತ್ಸ, ಕರುಣಾಕರ ಪ್ರಕಾಶ, ದಯಾನಂದ, ಧನಂಜಯ ಶಿವರಾಮ ಮಣಿಯಾಣಿ, ಶ್ರೀಮತಿ ನೇತ್ರ, ಶ್ರೀಮತಿ ಶ್ರೀಲತಾ,ಶ್ರೀಮತಿ ಪಾರ್ವತಿ, ಕು. ಸೌಮ್ಯ, ನಾರಣ್ಣಪ್ಪ ಟೈಲರ್ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಬನಾರಿ ನಂದಾಕಿಶೋರ್ ಧನ್ಯವಾದ ಗೈದರು ಹಾಗೂ ಶ್ಯಾಮ್ ಕುಮಾರ್ ಬೆನಕ ಕಾರ್ಯಕ್ರಮ ನಿರೂಪಿಸಿದರು.