ಅಟೋ ರಿಕ್ಷಾ ಚಾಲಕರ ಸಂಘದ ವತಿಯಿಂದ 75 ನೇ ಸ್ವಾತಂತ್ರ್ಯೋತ್ಸವ

0

 

 

ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ರಿ) ಬಿ.ಯಂ.ಯಸ್ ಸಂಯೋಜಿತ ಇದರ 75 ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಕಾರ್ಯಕ್ರಮ ಆ.15 ರಂದು ಬಸ್ ನಿಲ್ದಾಣದ ರಿಕ್ಷಾ ಪಾರ್ಕಿಂಗ್ ನಲ್ಲಿ ನಡೆಯಿತು.

ಕಾರ್ಯಕ್ರಮದ ದ್ವಜಾರೋಹಣವನ್ನು ಮಾಜಿ ಸೈನಿಕರಾದ ಚಂದ್ರಹಾಸ ಕಡ್ಯದ ನೆರವೇರಿಸಿ ಭಾಷಣ ಮಾಡಿದರು.
ಅಧ್ಯಕ್ಷರಾಗಿ ರಾಧಾಕೃಷ್ಣ ಬೈತಡ್ಕ ,
ಮುಖ್ಯ ಅತಿಥಗಳಾಗಿ ಬಿ ಯಂ ಯಸ್ ರಿಕ್ಷಾ ಚಾಲಕ ಸಂಘದ ಸ್ಥಾಪಕಾಧ್ಯಕ್ಷ ಹಾಗೂ ಭಾರತೀಯ ಮಜ್ದೂರ್ ಸೇವಾ ಟ್ರಸ್ಟ್ ಸುಳ್ಯ ಇದರ ಅಧ್ಯಕ್ಷ ಪಿ. ಗೋಪಾಲಕೃಷ್ಣ ಭಟ್,
ಜಿಲ್ಲಾ ಅಧ್ಯಕ್ಷರು ಭಾರತೀಯ ಮಜ್ದೂರ್ ಸೇವಾ ಸಂಘ ದ ಕ ಜಿಲ್ಲೆ ಹಾಗೂ ವಕೀಲರಾದ ಭಾಸ್ಕರ್ ರಾವ್ ಉಪಸ್ಥತರಿದ್ದರು. ರಾಧಾಕೃಷ್ಣ ಉಬರಡ್ಕ ಸ್ವಾಗತಿಸಿ, ವಿಜಯಕುಮಾರ್ ಉಬರಡ್ಕ ಕಾರ್ಯಕ್ರಮ ನಿರೂಪಿಸಿದರು.
ದ್ವಜ ಗೀತೆಯನ್ನು ನಾಗರಾಜ್ ಮುಳ್ಯ ಹಾಡಿದರು.
ಚಂದ್ರಶೇಖರ್ ಮರ್ಕಂಜ ಧನ್ಯವಾದ ಸಲ್ಲಿಸಿ, ಎಲ್ಲರಿಗೂ ಸಿಹಿತಿಂಡಿ ವಿತರಿಸಲಾಯಿತು.
ಸಿಹಿ ತಿಂಡಿಯನ್ನು ಕಲ್ಕಿ ಮೊಬೈಲ್ ನ ಕೃಷ್ಣಪ್ರಸಾದ್ ಕಲ್ಕಿ ಮೊಬೈಲ್ ಮತ್ತು ಮಾಲ್ಟನ್ನು ವೆಂಕಟೇಶ್ ಭಟ್ ಅವರು ಕೊಟ್ಟು ಸಹಕರಿಸಿದರು.