ಬಂಗ್ಲೆ ಗುಡ್ಡೆ : ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನಕ್ಕೆ ಕೆಪಿಸಿಸಿ ಸಂಯೋಜಕ ನಂದಕುಮಾರ್  ಭೇಟಿ

0

ಸುಳ್ಯದ ಬೀರಮಂಗಳದಲ್ಲಿರುವ ಬಂಗ್ಲೆಗುಡ್ಡೆ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನಕ್ಕೆ ಕೆಪಿಸಿಸಿ ಸಂಯೋಜಕ ನಂದಕುಮಾರ್ ಹೆಚ್ ಎಂ ಇಂದು ಭೇಟಿ ನೀಡಿದರು.


ದೈವಸ್ಥಾನದ ಸಮಿತಿಯವರ ಆಹ್ವಾನದ ಮೇರೆಗೆ ಇಂದು ಆಗಮಿಸಿದ ನಂದಕುಮಾರ್ ಹೆಚ್ ಎಂ ರವರು ಕೊರಗಜ್ಜ ದೈವದ ಸಂಕ್ರಮಣ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೈವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ ಧನಸಹಾಯ ನೀಡಿದರು.

ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯ ಧೀರಾ ಕ್ರಾಸ್ತ, ಮಾಜಿ ನಗರ ಪಂಚಾಯತ್ ಸದಸ್ಯ ಗೋಕುಲ್ ದಾಸ್, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ ಜೆ, ಮಾಜಿ ತಾ. ಪಂ. ಸದಸ್ಯ ತೀರ್ಥರಾಮ ಜಾಲ್ಸೂರು, ಗ್ರಾಮ ಪಂಚಾಯತ್ ಸದಸ್ಯ ಸಚಿನ್ ರಾಜ್ ಶೆಟ್ಟಿ, ದೈವಸ್ಥಾನದ ಹಿರಿಯರಾದ ಗುರುವಪ್ಪ, ಅರ್ಚಕ ಕೇಶವ ಬಿ, ಬ್ಲಾಕ್ ಮಾಧ್ಯಮ ಸಂಯೋಜಕ ಭವಾನಿಶಂಕರ್ ಕಲ್ಮಡ್ಕ, ಚೇತನ್ ಕಜೆಗದ್ದೆ, ಮಡಿಕೇರಿ ಕಾಂಗ್ರೆಸ್ ಮುಖಂಡ ವಸಂತ್, ದೈವಸ್ಥಾನ ಸಮಿತಿಯ ಸದಸ್ಯರಾದ ಕೇಶವ ಮಾಸ್ತರ್, ಮಹೇಶ್ ಬೀರಮಂಗಳ, ಸೇರೇಂದ್ರ, ಧನುಷ್, ಕೃಷ್ಣ, ಗಣೇಶ್, ತೀರ್ಥರಾಜ್, ಉಪಸ್ಥಿತರಿದ್ದರು.