ಇಂದು ಸಿದ್ಧರಾಮಯ್ಯ ಕೊಯನಾಡಿಗೆ ಆಗಮನ

0

ಮಳೆ ಹಾನಿ ಪ್ರದೇಶ ವೀಕ್ಷಣೆ

 

ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ಧರಾಮಯ್ಯರವರು ಇಂದು ಕೊಡಗಿಗೆ ಆಗಮಿಸಲಿದ್ದು ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಲಿದ್ದಾರೆ. 

ಬೆಳಿಗ್ಗೆ 10.30 ಕ್ಕೆ ಮೈಸೂರಿನಿಂದ ಪೊನ್ನಂಪೇಟೆಗೆ ಬರಲಿರುವ ಸಿದ್ಧರಾಮಯ್ಯರು ಬಳಿಕ ಮದೆನಾಡು ಮೊಣ್ಣಂಗೇರಿ ಕರ್ತೋಜಿ ಗುಡ್ಡ ದೇವರ ಕೊಲ್ಲಿ ಪ್ರದೇಶಗಳಲ್ಲಾಗಿರುವ ಹಾನಿಯನ್ನು ವೀಕ್ಷಿಸಿ, ಮಧ್ಯಾಹ್ನ 12.45 ಕ್ಕೆ ಕೊಯನಾಡು ಕಿಂಡಿ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿ, ಸಂತ್ರಸ್ತರೊಡನೆ ಸಮಾಲೋಚಿಸುವರು.