ಹಾಸನಡ್ಕ :  ಶ್ರೀ ಕೃಷ್ಣ ಜನ್ಮಾಷ್ಟಮಿ‌ ಆಚರಣೆ

0

 

 

ಗೆಳೆಯರ ಬಳಗ ಹಾಸನಡ್ಕ ಇದರ ವತಿಯಿಂದಶ್ರೀ ಕೃಷ್ಣ ಜನ್ಮಾಷ್ಟಮಿ‌ ಹಾಸನಡ್ಕ ಶಾಲಾ ವಠಾರದಲ್ಲಿ ನಡೆಯಿತು. ಬೆಳಿಗ್ಗೆ ಭಜನಾ ಕಾರ್ಯಕ್ರಮ ವನ್ನು ನಿವೃತ್ತ ಶಿಕ್ಷಕರಾದ ಜಯಲಕ್ಷ್ಮಿ ಉರುಂಬಿ ಉದ್ಘಾಟಿಸಿದರು .

ಅಂಗನವಾಡಿ ಮಕ್ಕಳಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆ, ಕಾಳುಹೆಕ್ಕುವ ಸ್ಪರ್ಧೆ, ಶಾಲಾ ಮಕ್ಕಳಿಗೆ ಸಂಗೀತ ಕುರ್ಚಿ, ಭಕ್ತಿ ಗೀತೆ ಸ್ಪರ್ಧೆ, ಸಾರ್ವಜನಿಕ ಮಹಿಳೆಯರಿಗೆ ಸಂಗೀತ ಕುರ್ಚಿ ಸ್ಪರ್ಧೆಯು ನಡೆಯಿತು. ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಗೆಳೆಯರ ಬಳಗದ ಸದಸ್ಯರು ಭಾಗವಹಿಸಿದರು.