ಬೊಳುಬೈಲು: ನವಚೇತನ ಯುವಕ ಮಂಡಲದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ

0

 

ನವಚೇತನ ಗೌರವ ಸನ್ಮಾನ – ಪ್ರತಿಭಾ ಪುರಸ್ಕಾರ

ಜಾಲ್ಸೂರು ಗ್ರಾಮದ ಬೊಳುಬೈಲಿನ ನವಚೇತನ ಯುವಕಮಂಡಲದ ವತಿಯಿಂದ 28ನೇ ವರುಷದ ಶ್ರೀಕೃಷ್ಣ ಜನ್ಮಾಷ್ಣಮಿಯನ್ನು ಆ.18ರಂದು ನವಚೇತನ ಮೈದಾನದಲ್ಲಿ ಆಚರಿಸಲಾಯಿತು.


ಕಾರ್ಯಕ್ರಮವನ್ನು ಶಿವರಾಮ ಗೌಡ ನಡುಬೆಟ್ಟು ಅವರು ಉದ್ಘಾಟಿಸಿ, ಶುಭಹಾರೈಸಿದರು. ಯುವಕಮಂಡಲದ ಅಧ್ಯಕ್ಷ ಶಶಿಪ್ರಸಾದ್ ಕಾಟೂರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಪುರುಷರಿಗೆ‌,ಮಹಿಳೆಯರಿಗೆ,ಮತ್ತು ಮಕ್ಕಳಿಗೆ ವಿವಿದ ಆಟೋಟ ಸ್ವರ್ಧೆಗಳನ್ನು ನಡೆಸಲಾಯಿತು.
ಐದು ವರುಷದ ಕೆಳಗಿನ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ವರ್ದೆ ನಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷ ಸುಧೀರ್ ನೆಕ್ರಾಜೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನವಚೇತನ ಗೌರವ ಸನ್ಮಾನ ಮತ್ತು ನವಚೇತನ ಪ್ರತಿಭಪುರಸ್ಕಾರ ನಡೆಯಿತು.
ಪ್ರಮುಖ ಭಾಷಣಕಾರರಾಗಿ ವಿಧಾನಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ, ಸುಳ್ಯದ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿಯ ಅಧ್ಯಕ್ಷ ಚಿದಾನಂದ ವಿದ್ಯಾನಗರ, ಜಾಲ್ಸೂರು ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎಂ. ಬಾಬು ಕದಿಕಡ್ಕ, ಕನಕಮಜಲು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಾ. ಗೋಪಾಲಕೃಷ್ಣ ಭಟ್ ಕಾಟೂರು ಗೌರವ ಉಪಸ್ಥಿತಿತರಿದ್ದರು. ಯುವಕಮಂಡಲದ ಅಧ್ಯಕ್ಷ ಶಶಿಪ್ರಸಾದ್ ಕಾಟೂರು ವೇದಿಕೆಯಲ್ಲಿ ಉಪಸ್ಥರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ india book of records,nobel world record ,ಯೋಗ ಬಾಲಸಾಧಕ ಮಾ. ಮೋನಿಷ್ ತಂಟೆಪ್ಪಾಡಿ‌ ಇವರಿಂದ ಯೋಗ ಪ್ರದರ್ಶನ, ನವಚೇತನ ಚಿಣ್ಣರಕೂಟದ ಕಲಾವಿದರಿಂದ ಜಾನಪದ ನೃತ್ಯ ವೈಭವ,ಸುದಿರ್ ಏನೆಕಲ್ಲು ನಿರ್ದೇಶನದ ಅರೆಭಾಷೆ ಚಲನಚಿತ್ರ ಕೇಸ್ ಪುಸ್ಕ, ಗಿರೀಶ್ ಬೈತಡ್ಕ ನಿರ್ದೇಶನದ ಮಾಯ ಚಲನಚಿತ್ರಗಳ‌‌ ಪ್ರದರ್ಶನ ನಡೆಯಿತು.