ಬ್ರಹ್ಮಕುಮಾರೀಸ್ ಧ್ಯಾನ ಕೇಂದ್ರದ ಶ್ರೀ ಕೃಷ್ಣ ಜನ್ಮಾಷ್ಠಮಿ ಉತ್ಸವದ ಧಾರ್ಮಿಕ ಸಭೆಯ ಸಮಾರೋಪ

0

 

ಸುಳ್ಯ ಬ್ರಹ್ಮಕುಮಾರೀಸ್ ಧ್ಯಾನ ಕೇಂದ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಉತ್ಸವದ ಆಚರಣೆಯ ಧಾರ್ಮಿಕ ಸಭಾ ಕಾರ್ಯಕ್ರಮದ ಸಮಾರೋಪ ಸಮಾರಂಭ ಆ.19 ರಂದು ನಡೆಯಿತು.
ಗಜೇಂದ್ರ ಗಡ
ಬ್ರಹ್ಮಕುಮಾರೀಸ್ ಸಂಚಾಲಕಿ ಬಿ.ಕೆ.ಸರೋಜ ಸಂದೇಶ ನೀಡಿದರು.


ಮುಖ್ಯ ಅತಿಥಿಗಳಾಗಿ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರರ ಹರಪ್ರಸಾದ್ ತುದಿಯಡ್ಕ, ಕಾಂತಮಂಗಲ ಸುಬ್ರಹ್ಮಣ್ಯ ದೇವಸ್ಥಾನದ ಅನುವಂಶಿಕ ಮೊಕ್ತೇಸರರ ಬಯಂಬು ಭಾಸ್ಕರ ರಾವ್, ನಾಗಪಟ್ಟಣ ಸದಾಶಿವ ದೇವಸ್ಥಾನದ ವ್ಯ.ಸ.ಮಾಜಿ ಅಧ್ಯಕ್ಷ ದಾಮೋದರ ಗೌಡ ನಾರ್ಕೋಡು, ಸಾಲಿಗ್ರಾಮ ಡಿವೈನ್ ಪಾರ್ಕ್ ಡಿ.ಎಸ್.ಯಶವಂತ್, ಮಂಗಳೂರು ಸಂಜೀವಿನಿ ಹೀಲಿಂಗ್ ಸೆಂಟರ್ ಆಪ್ತ ಸಮಾಲೋಚಕಿ ರೇವತಿ ಸನಿಲ್, ಶಶಿಕಲಾ ಹರಪ್ರಸಾದ್ ,ಕೋಟ ಬ್ರಹ್ಮಕುಮಾರೀಸ್ ಶಕುಂತಲಾ, ಸುಳ್ಯ ಕೇಂದ್ರ ದ ಬ್ರಹ್ಮಕುಮಾರೀಸ್ ಉಮಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರೇವತಿ ಸನಿಲ್ ರವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿರುವ ಅತಿಥಿಗಳಿಗೆ ರಕ್ಷೆಯನ್ನು ಕಟ್ಟಿದರು.
ಕೋಟ ಬ್ರಹ್ಮಕುಮಾರೀಸ್ ಸಂಚಾಲಕಿ ಡಾ. ಗಾಯತ್ರಿ ಯವರು
ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಕುಮಾರೀಸ್ ಕೇಂದ್ರದ ದುಗ್ಗಪ್ಪ ಸುಬ್ರಹ್ಮಣ್ಯ ರವರು ವಂದಿಸಿದರು.