ಅಕ್ಕೋಜಿಪಾಲ್: ಶ್ರೀ ಕೃಷ್ಣ ಜನ್ಮಷ್ಟಾಮಿ ಆಚರಣೆ

0

 

ಪಂಚಶ್ರೀ ಫ್ರೆಂಡ್ಸ್ ಕ್ಲಬ್ ಅಕ್ಕೋಜಿಪಾಲ್ ಇದರ ವತಿಯಿಂದ 13ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯು ಆ. 19 ರಂದು ನಡೆಯಿತು. ಪ್ರಗತಿಪರ ಕೃಷಿಕರಾದ ಜನಾರ್ದನ ಗೌಡ ಕೊರತ್ಯಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಕ್ಲಬ್ ನ ಗೌರವಾಧ್ಯಕ್ಷ ಬಾಲಕೃಷ್ಣ ಬೊಳ್ಳೂರು, ಇನ್ನೋರ್ವ ಪ್ರಗತಿಪರ ಕೃಷಿಕ ಪಿ.ಎಸ್ ಮೋನಪ್ಪ ಪುಳಿಮಾರಡ್ಕ, ನಿವೃತ್ತ ಬಿ.ಎಸ್.ಎನ್.ಎಲ್ ಆಫೀಸ್ ಸುಪರಿಟೆಂಡೆಂಟ್ ಮಹಾಬಲ ಗೌಡ ಅಲಗಿನಡ್ಕ ಉಪಸ್ಥಿತರಿದ್ದರು. ಕ್ಲಬ್ ನ ಕಾರ್ಯದರ್ಶಿ ಹರೀಶ್ ಜೋಗಿಯಡ್ಕ ಸ್ವಾಗತಿಸಿದರು. ಪ್ರವೀಣ್ ಮುಂಡ್ರಾಜೆ ವಂದಿಸಿದರು. ಮನೋಜ್ ಪಡ್ಪು ಕಾರ್ಯಕ್ರಮ ನಿರೂಪಿಸಿದರು.