ಸುಬ್ರಹ್ಮಣ್ಯ :18 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ

0

 

ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ವತಿಯಿಂದ 18 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆ.18 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಗವದ್ಭಕ್ತರು ಭಾಗಿಯಾಗಿದ್ದು
ಊರ ಹಾಗೂ ಪರವೂರ ಭಗವದ್ಭಕ್ತರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಯಿತು.
ಹಿರಿಯರಿಗೆ,ಕಿರಿಯರಿಗೆ, ಮಕ್ಕಳಿಗೆ ಸೇರಿದಂತೆ ಜಾರು ಕಂಬ, ಹಗ್ಗ ಜಗ್ಗಾಟ, ಮುದ್ದು ಕೃಷ್ಣ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು.


ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಕೃಷ್ಣ ಶರ್ಮ ಕಾರ್ಯಕ್ರಮ ಉದ್ಘಾಟಿಸಿದರು. ಸಂಜೆ
ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಸಾಧಕರದ ರಾಜ್ಯ ಪ್ರಶಸ್ತಿ ವಿಜೇತ ಪತ್ರಕರ್ತ ಬಾಲಕೃಷ್ಣ ಭೀಮಗುಳಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ 6ನೇ ಸ್ಥಾನ ಪಡೆದ ಕು. ಸ್ವಾತಿ. ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರಕಾಶ್ ಸುಬ್ರಹ್ಮಣ್ಯ ಮಣ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಮೇಶ್ ಕೆ.ಎನ್, ವಿಶ್ವನಾಥ ನಡುತೋಟ, ಕೆ. ಆರ್. ಶೆಟ್ಟಿಗಾರ್, ಗೋಪಾಲ ಎಣ್ಣೆಮಜಲು, ಸುಜಾತ ಗಣೇಶ್, ಕುಸುಮಾಧರ ಆರಾಧಾನಾ, ಯಶೋಧರ ನಡುಗಲ್ಲು, ದೀಪಕ್ ನಂಬಿಯಾರ್, ವಿನೋದ್ ಪಾಂಡ್ಯನ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.