ಕಲ್ಲು, ಮೊಟ್ಟೆ ಹೊಡೆಯೋದೇ ಬಿಜೆಪಿ ಸಂಸ್ಕ್ರತಿ

0

 

 

ವಿಪಕ್ಷನಾಯಕ ಸಿದ್ಧರಾಮಯ್ಯರ ಕಾರಿಗೆ ಮೊಟ್ಟೆ ಎಸೆದ ಘಟನೆಗೆ ಇಂಟಕ್ ಕಾಂಗ್ರೆಸ್ ಖಂಡನೆ

 

ಕೊಡಗು‌ ಜಿಲ್ಲೆಯಲ್ಲಿ ಇತ್ತೀಚಿಗೆ ಪ್ರಾಕೃತಿಕ ವಿಕೋಪದಿಂದ ಆದ ಹಾನಿಯ ಪರಿಶೀಲನೆ ಗೆ ಬಂದಿದ್ದ ರಾಜ್ಯ ಸರಕಾರದ ವಿಪಕ್ಷ ನಾಯಕ ಸಿದ್ಧರಾಮಯ್ಯರ ಕಾರಿಗೆ ಮಡಿಕೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದದ್ದಲ್ಲದೆ, ಘೇರಾವ್ ಮಾಡಿರುವ ಬಿಜೆಪಿಗರ ನಡೆ ಖಂಡನೀಯ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಇಂಟಕ್ ಕಾಂಗ್ರೆಸ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಾಜಿ ಮುಖ್ಯಮಂತ್ರಿ ಗಳಿಗೆ ಭದ್ರತೆ ನೀಡುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಪೋಲೀಸ್ ಇಲಾಖೆಯೂ ವಿಫಲಗೊಂಡಿದ್ದು, ಮೊಟ್ಟೆ, ಕಲ್ಲು‌ ಹೊಡೆಯುವುದು ಬಿಜೆಪಿಗರ ಸಂಸ್ಕ್ರತಿ ಯನ್ನು ತೋರಿಸುತ್ತದೆ. ಭದ್ರತೆ ನೀಡಲು ಸಾಧ್ಯವಾಗದಿರುವ ಸರಕಾರದ ಗೃಹ ಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.