ಜಾಲ್ಸೂರಿನಿಂದ ಸುಳ್ಯಕ್ಕೆ ಸ್ವಾತಂತ್ರ್ಯದ ನಡಿಗೆ

0

 

ಸ್ವಾತಂತ್ರ್ಯದ ನೈಜ ಇತಿಹಾಸ ತಿಳಿಸುವ ಕಾರ್ಯ : ರಮಾನಾಥ ರೈ

ಸ್ವಾತಂತ್ರ್ಯದ ಇತಿಹಾಸ ತಿದ್ದುವ ಜನರ ಮಧ್ಯೆ ನೈಜ ಇತಿಹಾಸವನ್ನು ನಡಿಗೆಯ ಮೂಲಕ ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯ ಕಾಂಗ್ರೆಸ್ ಪಕ್ಷ ಮಾಡಲಿದೆ” ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

 

ಜಾಲ್ಸೂರಿನಿಂದ ಆರಂಭಗೊಂಡ ಸ್ವಾತಂತ್ರ್ಯ ದ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಬ್ರಿಟಷರ ದಾಸ್ಯ ಸಂಕೋಲೆಯಿಂದ ಬಿಡಿಸಿ ಸ್ವಾತಂತ್ರ್ಯ ಕೊಡಿಸಿದ ಹಲವು ನಾಯಕರ ಸ್ಮರಣೆ ಆಗಬೇಕಾಗಿದೆ. ಮಹಾತ್ಮ ಗಾಂಧೀಜಿ, ನೆಹರೂ ಆದಿಯಾಗಿ ಹಲವು ನಾಯಕರ ತ್ಯಾಗಮಯಿ ಜೀವನ ನಮಗೆ ಆದರ್ಶಗಳು. ಕೆಲವರು ಈ ದೇಶದ ಸಂವಿಧಾನವನ್ನೇ ಅಪಹಾಸ್ಯ ಮಾಡುತ್ತಿದ್ದಾರೆ. ಆದ್ದರಿಂದ ಸಂವಿಧಾನದ ರಕ್ಷಣೆ ಹೊಣೆಯೂ ನಮ್ಮೆಲ್ಲರ ಮೇಲಿದೆ ಎಂದು ಅವರು ಹೇಳಿದರು.