ಚಿತ್ರ ಕಲಾವಿದ ಶಶಿ ಅಡ್ಕಾರು ಅವರು ಹಲಸಿನ ಎಲೆಯನ್ನು ಬಳಸಿ, ತಮ್ಮ ಕೈಚಳಕದಿಂದಾಗಿ ಗಣೇಶ ಚತುರ್ಥಿಯ ದಿನ ಗಣಪತಿಯನ್ನು ರಚಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಶಶಿ ಅಡ್ಕಾರು ಅವರು ಪ್ರತಿಯೊಂದು ಹಬ್ಬಗಳ ದಿನ ಹಾಗೂ ಗಣ್ಯ ವ್ಯಕ್ತಿಗಳ ಹುಟ್ಟುಹಬ್ಬದ ದಿನದಂದು ಮರದ ಎಲೆಯನ್ನು ಬಳಸಿ, ಅವರಿಗೆ ಶುಭಾಶಯ ಕೋರುವ ಕಲಾಕೃತಿಗಳನ್ನು ರಚಿಸುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.