ಕೋಟೆ ರಾಧಾಕೃಷ್ಣ ಗಿರಿಕೃಪಾ ನಿಧನ

0

 

ಸಾಮಾಜಿಕ ಧುರೀಣ, ಪ್ರಗತಿಪರ ಕೃಷಿಕ, ಹಿರಿಯ ಸಹಕಾರಿ ಕಳಂಜ ಗ್ರಾಮದ ಕೋಟೆ ರಾಧಾಕೃಷ್ಣ ಗಿರಿಕೃಪಾ ಪುಂಡೂರು ಸೆ. 3ರಂದು ಅಸೌಖ್ಯದಿಂದ ನಿಧನರಾದರು. ಇವರಿಗೆ 90 ವರ್ಷ ವಯಸ್ಸಾಗಿತ್ತು.
ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅಭಿವೃದ್ಧಿ ಸಮಿತಿಯಲ್ಲಿ ಸಕ್ರಿಯರಾಗಿದ್ದ ಇವರು ಕಳಂಜ ಯುವಕ ಮಂಡಲದ ಸ್ಥಾಪನೆಗೆ ಕಾರಣಕರ್ತರು. ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ, ಜೇನು ವ್ಯವಸಾಯ ಸಹಕಾರಿ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಇವರು ಊರಿನ ಅಭಿವೃದ್ಧಿಗಾಗಿ ಶ್ರಮಿಸಿದವರು. ಊರಿನ ಮೂಲಭೂತ ಸೌಕರ್ಯಗಳಾದ ರಸ್ತೆ ಅಭಿವೃದ್ಧಿ, ಬಸ್ಸು ವ್ಯವಸ್ಥೆಗಳ ಬಗ್ಗೆ ಹಲವು ಬಾರಿ ಇಲಾಖೆಗಳಿಗೆ ಭೇಟಿ ನೀಡಿ ಮನವಿ ಸಲ್ಲಿಸಿರುವುದಲ್ಲದೆ ಸಂಘ ಸಂಸ್ಥೆಗಳ ಅಭಿವೃದ್ಧಿಗೆ ಶ್ರಮಿಸಿದ್ದರು. ಮೃತರು ಪತ್ನಿ ಶ್ರೀಮತಿ ಶಂಕರಿ, ಪುತ್ರ ಸುಬ್ರಹ್ಮಣ್ಯ ಕೋಟೆ, ಪುತ್ರಿ ಶ್ರೀಮತಿ ಪುಷ್ಪಾವತಿ ಸತ್ಯನಾರಾಯಣ ಕಂಜರ್ಪಣೆ, ಸಹೋದರರಾದ ಸತ್ಯಮೂರ್ತಿ ಕೋಟೆ, ಪುತ್ತೂರು, ಲಿಂಗಪ್ಪಯ್ಯ ಕೋಟೆ, ಪುತ್ತೂರು, ಸಹೋದರಿಯರಾದ ಶ್ರೀಮತಿ ಗೌರಮ್ಮ ಕೇಶವಯ್ಯ ಸಂಕೇಶ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.