ಖ್ಯಾತ ನಿರ್ದೇಶಕರಾದ ಜಿ ವಿ ಅಯ್ಯರ್ ರವರ ಪುತ್ರ ಜಿ ವಿ ರಾಘವೇಂದ್ರಅಯ್ಯರ್ ರವರ ನಿರ್ದೇಶನದ “ಭೂ ನಾಟಕ ಮಂಡಳಿ” ಎಂಬ ಚಲನಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಬೆಂಗಳೂರಿನ ರೇಣುಕಾಂಬ ಸ್ಟುಡಿಯೊ ಮಲ್ಲೇಶ್ವರಂ ಇಲ್ಲಿ ನಡೆಯಿತು.
ಮುಖ್ಯ ಪಾತ್ರದಲ್ಲಿ ಡ್ರಾಮಾ ಜೂನಿಯರ್ ತುಷಾರ್ ಗೌಡ, ತಂದೆಯ ಪಾತ್ರದಲ್ಲಿ ರಾಜೇಶ್ ಕೃಷ್ಣನ್, ತಾಯಿಯಾಗಿ ಸ್ಪರ್ಶ ರೇಖಾ, ಡ್ರಾಮಾ ಜೂನಿಯರ್ ಮಹೇಂದ್ರ, ಕಾಮಿಡಿ ಕಿಲಾಡಿ ಅನೀಶ್ ನಟಿಸುತ್ತಿದ್ದು ಚಲನಚಿತ್ರವು ಸೆಪ್ಟೆಂಬರ್ 23 ರಂದು ತೆರೆಕಾಣಲಿದೆ.