ಕೋಲ್ಚಾರು : ಆನೆ ದಾಳಿ – ಅಪಾರ ಕೃಷಿ ಹಾನಿ

0

 

ಆಲೆಟ್ಟಿ ಗ್ರಾಮದ ಕೋಲ್ಚಾರು ಬಳಿಯ ಮಾಣಿಮರ್ಧು ಪ್ರದೇಶಕ್ಕೆ ಕಾಡಾನೆಗಳ ಹಿಂಡು ಕೃಷಿ ತೋಟಕ್ಕೆ ನುಗ್ಗಿ ಕೃಷಿ ಹಾನಿಗೊಳಿಸಿದ ಘಟನೆ ವರದಿಯಾಗಿದೆ.


ಶ್ರೀಧರ ಮಾಣಿಮರ್ಧುರವರ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಫಸಲಯ ನೀಡುತ್ತಿದ್ದ ಅಡಿಕೆ ಮರಗಳು, ಅಡಿಕೆ ಗಿಡಗಳು, ತೆಂಗಿನ ಮರಗಳಯ, ಬಾಳೆಗಳನ್ನು ಹಾನಿಗೊಳಿಸಿದೆ. ಅಲ್ಲದೇ ನೀರಾವರಿ ಉಪಯೋಗಕ್ಕೆ ಅಳವಡಿಸಿದ ಪೈಪ್ ಸೆಟ್ ಗಳನ್ನು ಕೂಡ ಹಾನಿಗೊಳಿಸಿದೆ.‌ ಆನೆ ಹಿಂಡು ದಾಳಿ‌ಮಾಡಿದ ಕಾರಣ ನಷ್ಟ ಉಂಟಾಗಿದೆ.