ಭಾರೀ ಮಳೆಗೆ ಪೈಲಾರು ಬಳಿಯ ಕೊಚ್ಚಡ್ಕ – ನಾಯರ್ ಕಲ್ಲು ಸಂಪರ್ಕ ಕಡಿತ

0

 

ಸೆಪ್ಟೆಂಬರ್ ಐದರಂದು ಸಂಜೆ ಸುರಿದ ಧಾರಾಕಾರ ಮಳೆಗೆ ಅಮರ ಮುಡ್ನೂರು ಗ್ರಾಮದ ಪೈಲೂರು ಬಳಿಯ ನಾಯಕಲ್ಲು ಕೊಚ್ಚಡ್ಕ ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದೆ ಇದರಿಂದಾಗಿ ನಾಯಕರನ್ನು ಕೊಚ್ಚಡ್ಕ ಸಂಪರ್ಕ ಕಡಿತಗೊಂಡಿದೆ. ಸೇತುವೆ ಮತ್ತು ತಡೆಗೋಡೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಸುಮಾರು 25 ಮನೆಗಳಿರುವ ಈ ಭಾಗ ಏಕೈಕ ರಸ್ತೆ ಇದಾಗಿದ್ದು, ಅಲ್ಲಿಯ ಮನೆಗಳು ದ್ವೀಪದಂತಾಗಿದೆ ಎಂದು ಅಮರಮುಡ್ನೂರು ಗ್ರಾ.ಪಂ. ಸದಸ್ಯ ಕೃಷ್ಣಪ್ರಸಾದ್ ಮಾಡಬಾಕಿಲು ಸುದ್ದಿಗೆ ತಿಳಿಸಿದ್ದಾರೆ.