ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘದ ಕಲ್ಲುಗುಂಡಿ ಘಟಕದ ಮಹಾಸಭೆ

0

 

 

ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ಬಿ.ಯಂ.ಯಸ್) ಕಲ್ಲುಗುಂಡಿ ಘಟಕ ಇದರ ವಾರ್ಷಿಕ ಮಹಾಸಭೆಯು ಸೆ.6 ರಂದು ಸಂಪಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸುಳ್ಯ ತಾಲೂಕು ಬಿ.ಯಂ.ಯಸ್ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ, ಕಾರ್ಯದರ್ಶಿ ಚಂದ್ರಶೇಖರ ಮರ್ಕಂಜ ಹಾಗೂ ಕಲ್ಲುಗುಂಡಿ ಬಿ.ಯಂ.ಯಸ್ ಘಟಕದ ಅಧ್ಯಕ್ಷರಾದ ವಸಂತ ಊರುಬೈಲ್ ಇವರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಕೋಶಾಧಿಕಾರಿ ಪ್ರಮೋದ್ ಖರ್ಚುವೆಚ್ಚಗಳ ಲೆಕ್ಕಾಚಾರವನ್ನು ಮಂಡಿಸಿದರು. ಕಾರ್ಯದರ್ಶಿ ಯಶೋದರ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು.

 


ಅಧ್ಯಕ್ಷರಾಗಿ ಕೇಶವ ಬಂಗ್ಲೆಗುಡ್ಡೆ
ಉಪಾಧ್ಯಕ್ಷ ಜಗದೀಶ್ ದೊಡ್ಡಡ್ಕ, ಪ್ರಧಾನ ಕಾರ್ಯದರ್ಶಿ ರವಿ ನಿಡಿಂಜಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ಕಾಪಿಲ, ಸಂಘಟನಾ ಕಾರ್ಯದರ್ಶಿ ರತ್ನಾಕರ ಕೈಪಡ್ಕ, ಹಾಗೂ ಪ್ರಭಾಕರ ಕಾಡುಪಂಜ
ನಿರ್ದೇಶಕರುಗಳಾಗಿ ರಮೇಶ್ ಎಸ್ ನೆಲ್ಲಿಕುಮೇರಿ ಹಾಗೂ ನವೀನ್ ಆಚಾರ್ಯ ಇವರುಗಳು ಆಯ್ಕೆಯಾದರು.
ಪ್ರಕೃತಿ ವಿಕೋಪದಿಂದ ಮನೆಕಳೆದುಕೊಂಡ ಸದಸ್ಯರಾದ ಸುಧಾಕರ ಬಾಚಿಗದ್ದೆ ಹಾಗೂ ಚಿದಾನಂದ ಮೂಡನಕಜೆ ಇವರಿಗೆ ಧನಸಹಾಯವನ್ನು ವಿತರಿಸಲಾಯಿತು.