ಸುಳ್ಯ ತಾಲೂಕು ಮಾಜಿ ಸೈನಿಕರ ಸಂಘದ ಮಹಾಸಭೆ

0

 

ನೂತನ ಆಡಳಿತ ಮಂಡಳಿ ಆಯ್ಕೆ

ಸುಳ್ಯ ತಾಲ್ಲೂಕು ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾ ಸಭೆಯು ಸುಳ್ಯದ ಎಪಿಎಂಸಿ ಸಭಾಂಗಣದಲ್ಲಿ ಸೆಪ್ಟೆಂಬರ್ 4ರಂದು ನಡೆಯಿತು.
ದೇರಣ್ಣ ಗೌಡ ಅಡ್ಡಂತಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ, ಪುತ್ತೂರು ಮಾಜಿ ಸೈನಿಕ ಸಂಘದ ಅಧ್ಯಕ್ಷ ರಾಮಚಂದ್ರ ಪುಚೇರಿ, ದ.ಕ. ಜಿಲ್ಲಾ ಸೈನಿಕ ಸಂಘದ ಮಾಜಿ ಕಾರ್ಯದರ್ಶಿ ಕ್ಯಾ. ದೀಪಕ್ ಅಡ್ಯಂತಾಯ, ಕಾರ್ಯದರ್ಶಿ ಮೋನಪ್ಪ ಅಡ್ಕಬಳೆ, ಕೋಶಾಧಿಕಾರಿ ಜಗದೀಶ್ ಕೆ.ಪಿ. ಉಪಸ್ಥಿತರಿದ್ದರು.


ಮುಂದಿನ ಆಡಳಿತ ಮಂಡಳಿಯ ಗೌರವಾಧ್ಯಕ್ಷರಾಗಿ ದೇರಣ್ಣ ಗೌಡ ಅಡ್ಡಂತ್ತಡ್ಕ, ಅಧ್ಯಕ್ಷರಾಗಿ ಕೆ.ಪಿ. ಜಗದೀಶ್, ಕಾರ್ಯದರ್ಶಿಯಾಗಿ ಮೋನಪ್ಪ ಅಡ್ಕಬಳೆ, ಕೋಶಾಧಿಕಾರಿಯಾಗಿ ಉತ್ತಪ್ಪ ಎಂ.ಸಿ., ಉಪಾಧ್ಯಕ್ಷರಾಗಿ ಮಾಧವ ಬಿ.ಕೆ., ತಿರುಮಲೇಶ್ವರ ಎಸ್., ಜೊತೆ ಕಾರ್ಯದರ್ಶಿಯಾಗಿ ರಘುಪತಿ ಯು.ಎಂ., ನಿರ್ದೇಶಕರಾಗಿ ಸೀತಾರಾಮ ಎನ್.ಜಿ., ಸಂಜೀವ ಎಂ., ಪದ್ಮನಾಭ ಯು.ಎಸ್., ನವೀನ ಪಿ., ಗೀತಾ ಕೆ.ಎಸ್. ಆಯ್ಕೆಯಾದರು.


ಮೋನಪ್ಪ ಅಡ್ಕಬಳೆ ಸ್ವಾಗತಿಸಿ, ಮಾಧವ ಬಿ.ಕೆ. ವಂದಿಸಿದರು.