ನಾಳೆ (ಸೆ.8) ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ

0

 

 

ಸಾರ್ವಜನಿಕರು ಸಹಕರಿಸುವಂತೆ ನ.ಪಂ. ವಿನಂತಿ


ಸುಳ್ಯ ನಗರದ ಕಲ್ಲುಮುಟ್ಲು ರೇಚಕಸ್ಥಾವರದ ನೀರೆತ್ತುವ ಜಾಕ್ ವೆಲ್ ನಲ್ಲಿ ಇತ್ತೀಚಿಗಿನ ವಿಪರೀತ ಮಳೆ ಹಾಗೂ ಭೂಕುಸಿತದಿಂದ ಸಂಪಾಜೆ ಕಡೆಯಿಂದ ಭಾರಿಪ್ರಮಾಣ ದಲ್ಲಿ ಕೆಸರು ಹರಿದುಬಂದು ಹೂಳು ತುಂಬಿರುವುದರಿಂದ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಿರುತ್ತದೆ. ಸದ್ರಿ ಬಾವಿಯಲ್ಲಿನ ಹೂಳೆತ್ತುವ ಕಾಮಗಾರಿಯು ಸೆಪ್ಟೆಂಬರ್ 6 ಮತ್ತು 7 ರಂದು ನಡೆದಿದ್ದು, ಸೆ. 8 ರಂದು ಕೂಡಾ ನಡೆಯಲಿದೆ. ಆದ್ದರಿಂದ ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ ನ.ಪಂ. ಅಧ್ಯಕ್ಷರು ವಿನಂತಿಸಿದ್ದಾರೆ.