ಅನಾರೋಗ್ಯ ಪೀಡಿತ ಬಾಲಕಿ ಸಮೀಕ್ಷಾಳಿಗೆ ಕೆಂಜಾಳ ಪಂಚಮುಖಿ ಗೆಳೆಯರಿಂದ ಧನ ಸಹಾಯ

0

 

ಗುತ್ತಿಗಾರು ಗ್ರಾಮದ ವಿಶ್ವನಾಥ ಮತ್ತು ಹೇಮಾವತಿ ದಂಪತಿಯ ಪುತ್ರಿ ಕು.ಸಮೀಕ್ಷಾ ಎಂಬ ಬಾಲಕಿಯು ಕಳೆದ ಹಲವಾರು ದಿನಗಳಿಂದ ಅನಾರೋಗ್ಯ ಪೀಡಿತಳಾಗಿದ್ದು ಚಿಕಿತ್ಸೆಯ ವೆಚ್ಚಕ್ಕಾಗಿ ಸುಬ್ರಹ್ಮಣ್ಯ ಕೆಂಜಾಳ ಪಂಚಮುಖಿ ಗೆಳೆಯರ ಬಳಗದವರು ಸಂಗ್ರಹಿಸಿದ ರೂ.61005/- ಧನ ಸಹಾಯವನ್ನು ನೀಡಿರುತ್ತಾರೆ. ಸಮೀಕ್ಷಾಳ ಮನೆಗೆ ತೆರಳಿ ಸಹಾಯ ದನ ನೀಡುವುದರೊಂದಿಗೆ ಮಾನವೀಯತೆ ಮೆರೆದಿದ್ದಾರೆ‌. ಯುವಕರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.