ಬೀದಿಗುಡ್ಡೆ :ನೂತನ ಗೋದಾಮು ಕಟ್ಟಡದಲ್ಲಿ ಗಣಪತಿ ಹವನ

0

 

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಬೀದಿಗುಡ್ಡೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗೋದಾಮು ಕಟ್ಟಡದಲ್ಲಿ ಗಣಪತಿ ಹವನವು ಸೆ. 8ರಂದು ಬೆಳಿಗ್ಗೆ ಜರಗಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ, ನಿರ್ದೇಶಕರಾದ ಶ್ರೀ ಕೃಷ್ಣ ಭಟ್ ಪಟೋಳಿ, ಚಿನ್ನಪ್ಪ ಚೊಟ್ಟೆಮಜಲು, ರಘುನಾಥ ರೈ ಕೆರೆಕ್ಕೋಡಿ, ಕಿಟ್ಟಣ್ಣ ಪೂಜಾರಿ, ತಾಲೂಕು ಭಜನಾ ಪರಿಷತ್ ಪೂರ್ವಾಧ್ಯಕ್ಷ ವಿಶ್ವನಾಥ ರೈ ಅರ್ಗುಡಿ, ಎಲ್ಯಣ್ಣ ಗೌಡ ಕಟ್ಟ, ಕೊರಗಪ್ಪ ಮಣಿಯಾಣಿ, ಇಂಜಿನಿಯರ್ ರಾಮಣ್ಣ ನಾಯ್ಕ, ಗುತ್ತಿಗೆದಾರ ಶಬೀರ್ ಬಾಳಿಲ,ಸಂಘದ ಸಿಬ್ಬಂದಿಗಳು , ಗ್ರಾಮಸ್ಥರು ಉಪಸ್ಥಿತರಿದ್ದರು.
ವೈಧಿಕ ಕಾರ್ಯಗಳು
ಅರ್ಚಕ ಹರಿಪ್ರಸಾದ್ ಕಲ್ಲೂರಾಯ ಮತ್ತು ರಘುಪತಿ ಕಲ್ಲೂರಾಯ ರವರ ನೇತೃತ್ವದಲ್ಲಿ ಜರುಗಿತು.