ಸ್ನೇಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಸಂದೇಶ್‌ರಿಗೆ ರಸಪ್ರಶ್ನೆಯಲ್ಲಿ ವಿವಿಧ ಬಹುಮಾನ

0

ಸ್ನೇಹ ಶಿಕ್ಷಣ ಸಂಸ್ಥೆಯ 10 ನೇ ತರಗತಿ ವಿದ್ಯಾರ್ಥಿ ಸಂದೇಶ್ ಕೆ.ಆರ್. ರವರು ಜವಾಹರ್ ಲಾಲ್ ನೆಹರೂ ತಾರಾಲಯ ಬೆಂಗಳೂರು ಅಸೋಶಿಯೇಶನ್ ಫಾರ್ ಸೈನ್ಸ್ ಎಜುಕೇಶನ್, ಮೈಸೂರು ವಿಭಾಗದಲ್ಲಿ ನಡೆದ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಮೊದಲನೇ, ಎರಡನೇ ಹಾಗೂ ಮೂರನೇ ಸುತ್ತಿನಲ್ಲಿ ಪ್ರಶಂಸನೀಯ ಪ್ರದರ್ಶನ ನೀಡಿ ನಾಲ್ಕನೇ ಸುತ್ತಿನ ಸ್ಪರ್ಧೆಯಲ್ಲಿ ಸ್ಪರ್ಧಿಸಿ ತೃತೀಯ ಸ್ಥಾನ ಪಡೆದರೆ, ಆಲೂರು ವೆಂಕಟರಾಯರು ಕನ್ನಡ ನಾಡು ನುಡಿ ಸಾಹಿತ್ಯ ಹಾಗೂ ಸಂಸ್ಕೃತಿ ಬಗ್ಗೆ ಜಿಲ್ಲಾ ಮಟ್ಟದಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಇವರು ಕೊಡಿಯಾಲಬೈಲು ರಾಜೇಶ್ ಕೆ ಎನ್ ಹಾಗೂ ಸಂಧ್ಯಾ ಕುಮಾರಿ ದಂಪತಿಗಳ ಪುತ್ರ.