ನಾಲ್ಕೂರು:   ಅಪಾಯವನ್ನು ಅಹ್ವಾನಿಸುವ ಮರಗಳ ತೆರವು ಮಾಡಿದ ವಿಪತ್ತು ನಿರ್ವಹಣಾ ಘಟಕ

0

 

ಸುಳ್ಯ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನಡಗಲ್ಲು ಕಲ್ಲಾಜೆ ಸಮಿಪದ ಗುಡ್ಡಕುಸಿತದ ಪರಿಣಾಮ ಕೆಲವು ಬೃಹತ್ ಮರಗಳು ರಸ್ತೆಗೆ ವಾಲಿನಿಂತಿದ್ದು, ಅಪಾಯವನ್ನು ಆಹ್ವಾನಿಸುತ್ತಿತ್ತು. ಇದನ್ನು ಗಮನಿಸಿದ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ನಾಲ್ಕೂರು ಇದರ ಸ್ವಯಂಸೇವಕರು ಅರಣ್ಯ ಇಲಾಖೆಯವರ ಸಹಕಾರದೊಂದಿಗೆ ಮರ ತೆರವು ಮಾಡಿದರು.

ಅರಣ್ಯ ಇಲಾಖೆಯ ನಾಲ್ಕೂರು ವಿಭಾಗದ ಅರಣ್ಯಧಿಕಾರಿ ಸದಾಶಿವ. ಅರಣ್ಯ ರಕ್ಷಕ ಅಶೋಕ್ ಇವರ ಜೊತೆಗೆ ಶೌರ್ಯ ತಂಡದ ಚಂದ್ರಶೇಖರ್ , ಲೋಹಿತ್, ಕರುಣಾಕರ್ ಹರಿಪ್ರಸಾದ್ , ಪ್ರಜ್ವಲ್ , ಕಾರ್ತಿಕ್, ದೀಪಕ್, ಶೇಷಪ್ಪ ನಾಯ್ಕ್ , ವಿನೂಪ್ ಮತ್ತಿತರರು ಸಹಕರಿಸಿದರು.