ಶುಭಕರ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿ ಸುಬ್ರಹ್ಮಣ್ಯ ಇದರ ವಾರ್ಷಿಕ ಮಹಾಸಭೆ

0

 

ಶುಭಕರ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿ ಸುಬ್ರಹ್ಮಣ್ಯ ಇದರ 8 ನೇ ವಾರ್ಷಿಕ ಮಹಾಸಭೆ ದಿನೇಶ್ ಬಿ. ಯನ್ ರವರ ಅಧ್ಯಕ್ಷತೆಯಲ್ಲಿ ಇಂದು ಸಂಘದ ಕಛೇರಿಯ ಆವರಣದಲ್ಲಿ ನಡೆಯಿತು. ಸಂಘವು ವರದಿ ಸಾಲಿನಲ್ಲಿ ರೂ.1,89,21,748.86 ವ್ಯವಹಾರ ನಡೆಸಿ, ರೂ.1,73,539.24 ನಿವ್ವಳ ಲಾಭ ಗಳಿಸುತ್ತದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಉಪಾಧ್ಯಕ್ಷ ರವೀಂದ್ರ ಕುಮಾರ್ ರುದ್ರಪಾದ ವೇದಿಕೆಯಲ್ಲಿದ್ದರು. ಸಂಘದ ನಿರ್ದೇಶಕರುಗಳಾದ ಕಿಶೋರ್ ಕುಮಾರ್ ಕೂಜುಗೋಡು, ವೆಂಕಟೇಶ್ ಎಚ್. ಎಲ್ ರವರು ಉಪಸ್ಥಿತರಿದ್ದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾದ ಗೋವರ್ಧನ್ ಕೆ. ಸಿ ರವರು ವಾರ್ಷಿಕ ವರದಿಯನ್ನು ಓದಿ, ಧನ್ಯವಾದ ಸಮರ್ಪಣೆ ಮಾಡಿದರು. ಶ್ರೀಮತಿ ಶ್ವೇತಾ ಪ್ರಾರ್ಥನೆ ನೆರವೇರಿಸಿದರು.