ಮರ್ಕಂಜ : ಮುಂಡೋಡಿ ಮಾಳಿಗೆ ಜೀರ್ಣೋದ್ಧಾರ ದ ಕುರಿತು ಭಕ್ತಾಧಿಗಳ ಸಭೆ

0

 

ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಳಿಗೊಳಪಟ್ಟ ಮುಂಡೋಡಿ ಮಾಳಿಗೆಯ ಜೀರ್ಣೋದ್ಧಾರದ ಕುರಿತು ಭಕ್ತಾಧಿಗಳ ಸಭೆಯು ಇಂದು ಕಾವೂರು ಶ್ರೀ ಮಹಾವಿಷ್ಣು ದೇವಸ್ಥಾನ ದ ವಠಾರದಲ್ಲಿ ಪಂಚಸ್ಥಾಪನೆಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವ ಗೌಡರವರ ಅಧ್ಯಕ್ಷತೆಯಲ್ಲಿ ನಡೆಯಿತು.

 

 

ಕಾವೂರು ದೇವಾಲಯದ ಸೇವಾ ಸಮಿತಿ ಅಧ್ಯಕ್ಷ ರಾಮಚಂದ್ರ ಹಲ್ದಡ್ಕ ಮುಂಡೋಡಿ ಮಾಳಿಗೆ ಜೀರ್ಣೋದ್ಧಾರ ದ ಬಗ್ಗೆ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಬಳಿಕ ಅಮೃತ ಕುಮಾರ್ ರೈಯವರು ಜೀರ್ಣೋದ್ಧಾರದ ಬಗ್ಗೆ ಮಾತನಾಡಿದರು. ಬಳಿಕ ಜೀರ್ಣೋದ್ಧಾರ ಸಮಿತಿ ರಚಿಸಲಾಯಿತು.

 

ವೇದಿಕೆಯಲ್ಲಿ ಜೀರ್ಣೋದ್ಧಾರ ಸಮಿತಿ ಸಂಚಾಲಕ ಹರೀಶ್ ಕಂಜಿಪಿಲಿ, ಕಾವೂರು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ರೆಂಜಾಳ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಜಗನ್ಮೋಹನ ರೈ ರೆಂಜಾಳ, ಮಂಟಮೆ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಈಶ್ವರಪ್ಪ ಗೌಡ ಹರ್ಲಡ್ಕ, ಪಂಚಸ್ಥಾಪನೆಗಳ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಶ್ರೀಮತಿ ರಾಜೇಶ್ವರಿ ಕುಮಾರಸ್ವಾಮಿ, ಧರ್ಮಪಾಲ ಸುಳ್ಳಿ, ಕಮಲಾಕ್ಷ ಪುರ, ಭಜನಾ ಮಂಡಳಿ ಅಧ್ಯಕ್ಷ ಯತೀಶ್ ಕಂಜಿಪಿಲಿ ಹಾಗೂ ಮುಂಡೋಡಿ ಮಾಳಿಗೆ ಜೀರ್ಣೋದ್ಧಾರ ಸಮಿತಿ‌ ನೂತನ ಅಧ್ಯಕ್ಷ ಕೃಷ್ಣ ಕಿಶೋರ್ ಬಾಳಿಲ, ಪ್ರಧಾನ ಕಾರ್ಯದರ್ಶಿ ಶಾಂತಾಪ್ಪ ರೈ ಅಂಗಡಿಮಜಲು ಉಪಸ್ಥಿತರಿದ್ದರು.