ಕೇಂದ್ರ ರಬ್ಬರ್ ಮಂಡಳಿಯ ಸದಸ್ಯರಾಗಿ ಮುಳಿಯ ಕೇಶವ ಭಟ್

0

 

ಭಾರತ ಸರ್ಕಾರವು ಕೇಂದ್ರ ರಬ್ಬರ್ ಮಂಡಳಿಯ ಸದಸ್ಯರನ್ನಾಗಿ ಬಿಜೆಪಿ ಮುಖಂಡ ಮುಳಿಯ ಕೇಶವ ಭಟ್ ಅವರನ್ನು ನೇಮಕ ಮಾಡಿದೆ. ಭಾರತ ಸರಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಯಕ್ತ ಸಂಸ್ಥೆಯಾಗಿರುವ ಈ ರಬ್ಬರ್ ಮಂಡಳಿಯ ಪ್ರಧಾನ ಕಛೇರಿ ಕೇರಲದ ಕೊಟ್ಟಾಯಂ ನಲ್ಲಿದೆ.

ಸಂಸದ ನಳಿನ್ ಕುಮಾರ್ ಕಟೀಲು ಸಹಿತ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ಐ ಎ ಎಸ್ ಅಧಿಕಾರಿಗಳು, ಪದನಿಮಿತ್ತ ವಿವಿಧ ಇಲಾಖಾಧಿಕಾರಿಗಳು ಇರಲಿದ್ದಾರೆ.
ಮುಳಿಯ ಕೇಶವ ಅವರು ಸುಳ್ಯ ತಾಲೂಕು ಪಂಚಾಯತ್ ನ ಮಾಜಿ ಅಧ್ಯಕ್ಷರಾಗಿರುವ ಮುಳಿಯ ಕೇಶವ ಭಟ್ ಅವರು ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷರಾಗಿದ್ದು ಹಾಲಿ ನಿರ್ದೇಶಕರಾಗಿದ್ದಾರೆ. ದ.ಕ ಜಿಲ್ಲಾ ಬಿಜೆಪಿಯ ಕಾರ್ಯದರ್ಶಿ.