ಐವರ್ನಾಡಿನಲ್ಲಿ ಪಂಚಶ್ರೀ ಆಗ್ರೋಟೆಕ್ ಶುಭಾರಂಭ

0

 

ಐವರ್ನಾಡಿನ ಕೃಪಾ ಮಡ್ತಿಲ ಕಾಂಪ್ಲೆಕ್ಸ್ ನಲ್ಲಿ ಗುರುರಾಜ್ ನಿಡುಬೆಯವರ ಮಾಲಕತ್ವದ ಪಂಚಶ್ರೀ ಆಗ್ರೋಟೆಕ್ ಅ.02 ರಂದು ಶುಭಾರಂಭಗೊಂಡಿತು.


ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್ .ಮನ್ಮಥ ರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಅಚ್ಚುತ ಗೌಡ ಕುದುಂಗು, ಜೆ.ಟಿ.ವೆಂಕಪ್ಪ ಗೌಡ ಜಬಳೆ,ಕಟ್ಟಡದ ಮಾಲಕರಾದ ಸತೀಶ ಮಡ್ತಿಲ, ಮನೋಜ್ ಕುಮಾರ್ ರೈ ಮೇನಾಲ, ಶೇಖರ ಮಡ್ತಿಲ, ರವಿನಾಥ ಮಡ್ತಿಲ, ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ, ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು, ಐತ್ತಪ್ಪ ಮೂಲ್ಯ ನಿಡುಬೆ,ಶ್ರೀಮತಿ ರತ್ನ, ಕೊರಗಪ್ಪ ಕುಲಾಲ್ ,ಗ್ರಾ.ಪಂ.ಸದಸ್ಯ ಯೋಗೀಶ ಕಲ್ಲಗದ್ದೆ, ಉಮೇಶ್ ಮಾಸ್ತರ್ ಪಲ್ಲತ್ತಡ್ಕ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಇಲ್ಲಿ ಆಧುನಿಕ ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸರ್ವಿಸ್ ನಡೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.