ಸುಳ್ಯ ರಥಬೀದಿಯಲ್ಲಿ ಕಾಫಿ ಕಾರ್ನರ್ ಶುಭಾರಂಭ

0

 

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿ ರಾಜೇಶ್ವರಿ ಕಾಂಪ್ಲೆಕ್ಸ್ ನಲ್ಲಿ ಶ್ರೀ ಭಗವತಿ ಸರ್ವಿಸ್ ಸ್ಟೇಷನ್ ಮಾಲಕ ಅರುಣ್ ರಾವ್ ಜಾದವ್ ಮಾಲಕತ್ವದ ಕಾಫಿ ಕಾರ್ನರ್ ಅ‌.2 ರಂದು ಶುಭಾರಂಭಗೊಂಡಿತು.ಈ ಸಂದರ್ಭದಲ್ಲಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ , ಪಾಲುದಾರ ದಾಕೋಜಿ ರಾವ್ ಜಟ್ಟಿಪಳ್ಳ ಹಾಗೂ ನಾಗೇಶ್ ಬಿಳಿಯಾರು, ಲತೀಶ್ ಗುಂಡ್ಯ, ಗಿರೀಶ್ , ಶ್ರೀಮತಿ ವಿದ್ಯಾಶ್ರೀ ಅರುಣ್ ರಾವ್, ಮನೋಜ್ ರಾವ್ ಕೇರ್ಪಳ, ಚಂದ್ರಶೇಖರ ಕೇರ್ಪಳ , ಚಿಂತನ್ , ಜಯೇಶ್ ಉಬರಡ್ಕ ಮತ್ತಿತರರು ಉಪಸ್ಥಿತರಿದ್ದರು.
ಕಾಫಿ ಕಾರ್ನರ್ ನಲ್ಲಿ ಫ್ರೆಶ್ ಜ್ಯೂಸ್ ಹಾಗೂ ಕಾಫಿ,ಟಿ, ಲೆಮೆನ್ ಟಿ, ಮಸಾಲೆ ಟಿ‌ ಹಾಗೂ ತಿಂಡಿ ತಿನಿಸುಗಳು ಲಭ್ಯವಿರುವುದಾಗಿ ಮಾಲಕರು ತಿಳಿಸಿರುತ್ತಾರೆ.