ಕಾಪ್ಯಾ ತೇಯಮ್ಮರವರ ಶ್ರದ್ದಾಂಜಲಿ ಸಭೆ

0


ಇತ್ತೀಚೆಗೆ ನಿಧನರಾದ ಮಂಡೆಕೋಲು ಗ್ರಾಮದ ಕಾಪ್ಯಾ ತೇಯಮ್ಮರವರ ಶ್ರದ್ದಾಂಜಲಿ ಸಭೆಯು ಇಂದು ಮೃತರ ಮನೆಯಲ್ಲಿ ನಡೆಯಿತು.
ಯಾದವ ಸಭಾ ಕೇಂದ್ರ ಸಮಿತಿಯ ಸಲಹಾ ಮಂಡಳಿ ಅಧ್ಯಕ್ಷ ಸುಧಾಮ ಆಲೆಟ್ಟಿಯವರು ನುಡಿನಮಗೈದರು. ಈ ಸಂದರ್ಭದಲ್ಲಿ ಯಾದವ ಸಭಾ ಕೇಂದ್ರ ಸಮಿತಿ ಅಧ್ಯಕ್ಷ ಎ.ಕೆ. ಮಣಿಯಾಣಿ, ಪ್ರಧಾನ ಕಾರ್ಯದರ್ಶಿ ಸದಾನಂದ ಕಾವೂರು, ಕೇಂದ್ರ ಸಮಿತಿ ಉಪಾಧ್ಯಕ್ಷ ವಿ.ವಿ.ಬಾಲನ್, ಕಾರ್ಯದರ್ಶಿ ರಾಮಚಂದ್ರ ಕೇನಾಜೆ, ಯಾದವ ಸಭಾ ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ಯಾದವ ಸಭಾ ಪ್ರಾದೇಶಿಕ ಸಮಿತಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ ಅಕ್ಕಪ್ಪಾಡಿ, ಯಾದವ ಸಭಾ ತಾ. ಸಮಿತಿ ನಿಕಟಪೂರ್ವಾಧ್ಯಕ್ಷ ಜನಾರ್ದನ ಕಣಕ್ಕೂರು, ಕೊರಗಪ್ಪ ಮಾಸ್ತರ್ ಕಣಕ್ಕೂರು, ಜಿ.ಪಂ.ಮಾಜಿ ಸದಸ್ಯೆ ಪುಷ್ಪಾವತಿ ಬಾಳಿಲ, ಯಾದವ ಸಭಾ ತಾ. ಸಮಿತಿ ಉಪಾಧ್ಯಕ್ಷ ಬಾಲಕೃಷ್ಣ ಅಡ್ಡಬೈಲು, ಕೃಷ್ಣ ಅಕ್ಕಪ್ಪಾಡಿ, ಕಾಪ್ಯಾ ತರವಾಡಿನ ಕುಟುಂಬಸ್ಥರು, ಮತ್ತು ಮನೆಯವರು ಉಪಸ್ಥಿತರಿದ್ದರು.