ಪಂಜ: ಶ್ರೀ ಶಾರದೋತ್ಸವ

0

ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆ

  ಮಧ್ಯಾಹ್ನ ಸಾಂಸ್ಕೃತಿಕ ಸಂಭ್ರಮ

 ಸಂಜೆ ವೈಭವದ ಶೋಭಾಯಾತ್ರೆ

ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ , ಶ್ರೀ ಶಾರದೋತ್ಸವ
ಸಮಿತಿ-2022 ಇದರ ಆಶ್ರಯದಲ್ಲಿ ಪಂಜ ನಾಡ ಹಬ್ಬ ಶ್ರೀ ಶಾರದೋತ್ಸವವು ಅ.5 ರಂದು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಜರಗಿತು.ಮುಂಜಾನೆ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆ ಗೊಂಡಿತು.
ಸಾಂಸ್ಕೃತಿಕ ಸ್ಪರ್ಧೆಯನ್ನು ಪಂಜ ವಲಯಾರಣ್ಯಾಧಿಕಾರಿ ಮಂಜುನಾಥ್ ಎನ್ ಉದ್ಘಾಟಿಸಿ ಶುಭ ಹಾರೈಸಿದರು.ಕ್ರೀಡಾ ಸ್ಪರ್ಧೆಯನ್ನು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ತುಕಾರಾಮ ಯೇನೆಕಲ್ಲು ಉದ್ಘಾಟಿಸಿ ಶುಭಹಾರೈಸಿದರು.ಸಭಾಧ್ಯಕ್ಷತೆಯನ್ನು ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷ ಲೋಕೇಶ್ ಬರೆಮೇಲು ಸಭಾಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಉತ್ಸವ ಸಮಿತಿಯ ಕಾರ್ಯದರ್ಶಿ ಕುಸುಮಾಧರ ಕೆಮ್ಮೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸುದರ್ಶನ ಪಟ್ಟಾಜೆ ಪ್ರಾರ್ಥಿಸಿದರು.ಉತ್ಸವ ಸಮಿತಿಯ ಅಧ್ಯಕ್ಷ ಲೋಕೇಶ್ ಬರೆಮೇಲು ಸ್ವಾಗತಿಸಿದರು. ಜಯರಾಮ ಕಲ್ಲಾಜೆ ನಿರೂಪಿಸಿದರು.ಉತ್ಸವ ಸಮಿತಿಯ ಕಾರ್ಯದರ್ಶಿ ಕುಸುಮಾಧರ ಕೆಮ್ಮೂರು ವಂದಿಸಿದರು.ಬಳಿಕ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ಜರುಗಿತು.ಮುಂಜಾನೆ ಶ್ರೀ ಶಾರದಾ ದೇವಿಯ ಪ್ರತಿಷ್ಠೆ , ಗಣಹೋಮ, ವಿವಿಧ ವೈಧಿಕ ಕಾರ್ಯಕ್ರಮಗಳು, ಭಜನಾ ಸಂಕೀರ್ತನೆ ನಡೆದು ಉತ್ಸವ
ಆರಂಭ ಗೊಂಡಿತು.

ಸಾಂಸ್ಕೃತಿಕ ಸಂಭ್ರಮ: ಮಧ್ಯಾಹ್ನ 1.30 ರಿಂದ ಸವ್ಯ ಸಾಚಿ ಸುಭಾಷ್ ಪಂಜ ರವರ ನಿರ್ದೇಶನದಲ್ಲಿ ಶಾರದಾಂಬಾ ಕಲಾ ತಂಡ ಪ್ರಸ್ತುತಿಯ (ಐತಿಹಾಸಿಕ ಘಟನೆಗಳ ಅನಾವರಣ)ಹೊಸಕೆರೆ ಹೊನ್ನಮ್ಮ ಎಂಬ ನಾಟಕ, ವಿಶ್ವ ಕಲಾನಿಕೇತನ ಕಲ್ಚರಲ್ ಮತ್ತು ಆರ್ಟ್ಸ್ ಪುತ್ತೂರು ಇದರ ಪಂಜ ಶಾಖೆಯ ವಿದ್ಯಾರ್ಥಿಗಳಿಂದ ಭರತ ನಾಟ್ಯ ಪ್ರದರ್ಶನ ಗೊಳ್ಳಲಿದೆ.

ಇಂದು ಸಂಜೆ ವೈಭವದ ಶೋಭಾಯಾತ್ರೆ:
ಇಂದು (ಅ.5) ಸಂಜೆ 6 ರಿಂದ ಶ್ರೀ ಶಾರದಾ ಮಾತೆಯ ವೈಭವದ ಶೋಭಾಯಾತ್ರೆ -ಜಲಸ್ತಂಭನದಲ್ಲಿ ಕುಣಿತ ಭಜನೆ, ಭಜನೆ, ಹುಲಿವೇಷ, ಟ್ಯಾಬ್ಲೊ, ಚೆಂಡೆ ವಾದನ,ಕೋಲಾಟ, ವಿಶೇಷ ಆಕರ್ಷಣೆಯಾಗಲಿದೆ.