ಕರ್ಲಪ್ಪಾಡಿ ಕ್ಷೇತ್ರದಲ್ಲಿ ಕದಿರು ಪೂಜೆ

0

 

ತಾರಸಿಯಲ್ಲಿ ಪೈರು ಬೆಳೆದು ದೇವಸ್ಥಾನಕ್ಕೆ ನೀಡಿದ ಕೃಷ್ಣಪ್ಪ ಗೌಡ ಪಡ್ಡಂಬೈಲು ಮಂಗಳೂರು

 

 

ಅಜ್ಜಾವರದ ಕರ್ಲಪ್ಪಾಡಿ ಶ್ರೀ ಶಾಸ್ತವೇಶ್ವರ ದೇವಾಲಯದಲ್ಲಿ ಕದಿರು ಪೂಜೆ ನಡೆಯಿತು.
ಊರ ಹಾಗೂ ಪರವೂರ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರಾಜೇಶ್ ಮೇನಾಲ, ಸದಸ್ಯರಾದ ವೆಂಕಟರಮಣ ಅತ್ಯಾಡಿ, ಸೀತಾರಾಮ ಕರ್ಲಪ್ಪಾಡಿ, ಮುದ್ದಪ್ಪ ಗೌಡ ಕುಡೆಂಬಿ, ಕರುಣಾಕರ ಕೊಡೆಂಕೇರಿ, ವಿಜಯ ಪಡ್ಡಂಬೈಲು, ಜಗನಾಥ್ ರೈ ಪಡ್ಡಯಿ ಬನ ರೂಪಾನಂದ ಕರ್ಲಪ್ಪಾಡಿ, ರಾಮಚಂದ್ರ ಮ್ಯಾನೇಜರ್, ಬಾಲಕೃಷ್ಣ ಪಡ್ಡಂಬೈಲು, ಅನಿಲ್ ಕರ್ಲಪ್ಪಾಡಿ, ಜಯರಾಮ ಪಿ, ಲೋಕೇಶ್ ಮುಡೂರು, ಸಂಪತ್ ಎಸ್ ಹಾಗೂ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ಮಂಗಳೂರಿನ ಪ್ರಸಿದ್ಧ ಟೆರೇಸ್ ಕೃಷಿಕ ಕೃಷ್ಣಪ್ಪ ಗೌಡ ಪಡ್ದoಬೈಲುರವರು ದೇವಸ್ಥಾನ ಕ್ಕಾಗಿ ತಮ್ಮ ಮನೆಯ ಟೆರೇಸ್ ಮೇಲೆ ಬೆಳೆದ ಗಂಧಸಾಲೆ ಪೈರು (ಕುರಲ್ ) ನ್ನು ಸೇವಾರೂಪದಲ್ಲಿ ದೇವಾಲಯಕ್ಕೆ ನೀಡಿರುತ್ತಾರೆ.