ಸುಳ್ಯ ದಸರಾ ಶೋಭಾಯಾತ್ರೆಗೆ ಆಲೆಟ್ಟಿ ಜೆ.ಎಫ್.ಸಿ. ಟೈಗರ್ಸ್ ತಂಡದವರ ಪಿಲಿರಂಗ್ – ಪೋಸ್ಟರ್ ಬಿಡುಗಡೆ

0

ಸುಳ್ಯ ದಸರಾ ಉತ್ಸವದ ಶಾರದಾಮಾತೆಯ ಶೋಭಾಯಾತ್ರೆಗೆ ಆಲೆಟ್ಟಿಯ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ನವರ ವತಿಯಿಂದ 3‌ ನೇ ವರ್ಷದಜೆ.ಎಫ್.ಸಿ.
ಟೈಗರ್ಸ್ ಯುವಕರ ತಂಡದಪ್ರಾಯೋಜಕತ್ವದಲ್ಲಿ ವಿಶೇಷ ಆಕರ್ಷಣೆಯ ಪಿಲಿರಂಗ್ (ಹುಲಿ ಕುಣಿತ) ತಂಡವು ಮೆರುಗು ನೀಡಲಿದ್ದು ಇದರ ಪೋಸ್ಟರ್ ನ್ನು ಇಂದು ಸುಳ್ಯದ ಕಲ್ಕುಡ ದೈವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.

ಶಾರದಾಂಬಾ ಸೇವಾ ಟ್ರಸ್ಟ್ ಅಧ್ಯಕ್ಷ ನಾರಾಯಣ ಕೇಕಡ್ಕ ಪೋಸ್ಟರ್ ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ದೈವಸ್ಥಾನದ ಪೂಜಾರಿ ತಿಮ್ಮಪ್ಪ ಗೌಡ ನಾವೂರು ಪ್ರಾರ್ಥನೆಯನ್ನು ನೆರವೇರಿಸಿದರು.
ಆಡಳಿತ ಮಂಡಳಿಯ ಸದಸ್ಯ ಚಂದ್ರಶೇಖರ ಸೆಂಚುರಿ,ಹುಲಿ ವೇಷಧಾರಿ ಸಂಜೀವ ಜಟ್ಟಿಪಳ್ಳ,ಆಲೆಟ್ಟಿ ಜೆ.ಎಫ್.ಸಿ ಟೈಗರ್ಸ್ ತಂಡದ
ಅಧ್ಯಕ್ಷ ಅಭಿಲಾಷ್ ಕೊಲ್ಲರಮೂಲೆ, ಕಾರ್ಯದರ್ಶಿ ಲತೀಶ್ ಗುಂಡ್ಯ, ಕೋಶಾಧಿಕಾರಿ ರೋಹಿತ್ ಕುಡೆಕಲ್ಲು, ಜನನಿಯ ಗೌರವಾಧ್ಯಕ್ಷ ನಿತಿನ್ ಗುಂಡ್ಯ, ಅಧ್ಯಕ್ಷ ತೀರ್ಥರಾಮ ವಾಲ್ತಾಜೆ, ಸುನಿಲ್ ಗುಂಡ್ಯ, ಹರಿಪ್ರಸಾದ್,


ಪ್ರಣೀತ್ ಕಣಕ್ಕೂರು, ಜಯಪ್ರಕಾಶ್ ಅರಂಬೂರು, ನಾಗರಾಜ್ ಮೂಲೆಬಡ್ಡಡ್ಕ, ನಾಗರಾಜ್ ಬಡ್ಡಡ್ಕ, ಪ್ರದೀಪ್ ಕೊಲ್ಲರಮೂಲೆ, ಸೀತಾರಾಮ ಕಣಕ್ಕೂರು, ಚಿತ್ರವೇಲು ನಾಗಪಟ್ಟಣ, ಯತಿರಾಜ್ ಕೊಯಿಂಗಾಜೆ, ಮೋಹಿತ್ ವಾಲ್ತಾಜೆ, ಧನುಷ್ ಆಲೆಟ್ಟಿ,ಗಗನ್ ಆಲೆಟ್ಟಿ,ಶಿವಪ್ರಸಾದ್ ಆಲೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಅ.16 ರಂದು ಸಂಜೆ ಆಲೆಟ್ಟಿ ಸದಾಶಿವ ದೇವಸ್ಥಾನದ ವಠಾರದಲ್ಲಿ ವಿಶೇಷವಾಗಿ ಸಂಗೀತ ರಸಮಂಜರಿ ಮತ್ತು ‌ಊದು ಪೂಜೆ ಹಾಗೂ ಮರುದಿನ ಬೆಳಗ್ಗೆ ಹುಲಿವೇಷ ಕುಣಿತವು ಇಳಿಯುವುದಾಗಿ ಅಧ್ಯಕ್ಷ ಅಭಿಲಾಷ್ ಕೊಲ್ಲರಮೂಲೆ ಯವರು ತಿಳಿಸಿದರು.