ಶ್ರೀ ವಯನಾಟ್ ಕುಲವನ್ ದೈವ ,ಸೂಟೆ ಸಮರ್ಪಣೆ















ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವ ದ ದಿನವಾದ ಮಾ.18 ರಂದು ಬೆಳಗ್ಗೆ ಶ್ರೀ ಕಾರ್ನವನ್,
ಶ್ರೀ ಕೋರಚ್ಚನ್ ದೈವ ಹಾಗೂ ಕಂಡನಾರ್ ಕೇಳನ್ ದೈವದ ನರ್ತನ ಸೇವೆಯು ನಡೆಯಿತು. ಬಳಿಕ ಸಂಜೆ ಶ್ರೀ ವಯನಾಟ್ ಕುಲವನ್ ದೈವದ ನರ್ತನ ಸೇವೆಯು ಜರುಗಿ ಸೂಟೆ ಸಮರ್ಪಣೆಯಾಯಿತು.
ಈ ಐತಿಹಾಸಿಕ ಕ್ಷಣವನ್ನು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾದಿಗಳು ಕಣ್ತುಂಬಿಕೊಂಡರು. ಆಗಮಿಸಿದ ಎಲ್ಲರಿಗೂ ರಾತ್ರಿ ಸಮಯದಲ್ಲಿ
ಅನ್ನ ಪ್ರಸಾದ ವಿತರಣೆಯಾಯಿತು.
ಈ ಸಂದರ್ಭದಲ್ಲಿ ಕುತ್ತಿಕೋಲು ಶ್ರೀ ತಂಬುರಾಟ್ಟಿ ಭಗವತಿ ಕ್ಷೇತ್ರದ ಸ್ಥಾನಿಕರು ಹಾಗೂ ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಕಾರ್ಯದರ್ಶಿ ಪವಿತ್ರನ್ ಗುಂಡ್ಯ, ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಬಾರ್ಪಣೆ, ಕುಟುಂಬದ ಯಜಮಾನ ಕುಂಞಕಣ್ಣ ಎ, ಕೋಶಾಧಿಕಾರಿ ರಧೀಶನ್ ಅರಂಬೂರು, ಜತ್ತಪ್ಪ ರೈ ಅರಂಬೂರು ಹಾಗೂ ಕಾರ್ಯಾಧ್ಯಕ್ಷರುಗಳು ,
ಸಮಿತಿಯ ಸಂಚಾಲಕರು ಮತ್ತು ಸದಸ್ಯರು, ತೀಯ ಸಮಾಜ ಬಾಂಧವರು ಉಪಸ್ಥಿತರಿದ್ದರು.












