ಕೆಂಪುಕಲ್ಲು, ಮರಳು ಅಭಾವ : ಶಾಶ್ವತ ಪರಿಹಾರ ಕುರಿತು ಸುಳ್ಯದಲ್ಲಿ ಸಮಾಲೋಚನಾ ಸಭೆ

0

ಸುಳ್ಯ ತಾಲೂಕಿನ ಮೂಲ ಸೌಕರ್ಯಗಳ ನಿರ್ಮಾಣ ಕಾರ್ಮಿಕರ ಮತ್ತು ಸಾಮಗ್ರಿ ಪೂರೈಕೆದಾರರ ವಿವಿಧ ಸಂಘಟನೆಗಳ ಪ್ರಮುಖರು ಇಂದು ಸುಳ್ಯ ಸಿಎ ಬ್ಯಾಂಕ್ ವಠಾರದಲ್ಲಿ ಸಭೆ ಸೇರಿ ಮರಳು ಮತ್ತು ಕೆಂಪು ಕಲ್ಲು ಪೂರೈಕೆ ಗಳಿಂದಾಗಿ ಆಗಿರುವ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಸೆಳೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಲಾಯಿತು.
ಈ ಸಭೆಯಲ್ಲಿ ತೀರ್ಥಕುಮಾರ್ ಕುಂಚಡ್ಕ, ಸುಬೋಧ್ ಶೆಟ್ಟಿ ಮೇನಾಲ, ಕೃಷ್ಣರಾವ್ ಇಂಜಿನಿಯರ್, ಮಧುಸೂದನ್, ಕಿಟ್ಟಣ್ಣ ರೈ, ಪ್ರಕಾಶ್ ಅಡ್ಕಾರ್,ಗಿರೀಶ್ ನಾರ್ಕೋಡು, ಮನೋಹರ್, ಬಾಲಚಂದ್ರ ಅಡ್ಕಾರ್, ಚಂದ್ರಶೇಖರ್ ಪನ್ನೆ, ಅವಿನ್ಎಂ.ಹೆಚ್, ಸುಬ್ರಹ್ಮಣ್ಯ ಕರ್ಲಪ್ಪಾಡಿ, ಚೇತನ್ ಕನಕಮಜಲು, ರಾಕೇಶ್ ಮುಂತಾದವರು ಉಪಸ್ಥಿತರಿದ್ದರು.