ಸುಳ್ಯ ತಾಲೂಕು ಸರ್ಕಾರಿ ಆಸ್ಪತ್ರೆ ಯಲ್ಲಿ ತಾಲೂಕಿನ ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಮಾಡುವ ಕ್ಯಾಂಪ್ ವಿಕಲಚೇತನರ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಜಂಟಿಯಾಗಿ ಜು. 22 ರಂದು ನಡೆಯಿತು.















ಈ ವೇಳೆ ತಾಲೂಕು ಪಂಚಾಯತ್ ನ ವಿಕಲಚೇತನರ ಇಲಾಖೆಯ ಎಂ.ಆರ್.ಡಬ್ಲ್ಯೂ ಚಂದ್ರಶೇಖರ್, ನಗರ ಪಂಚಾಯತ್ ನ ವಿಕಲ ಚೇತನರ ಇಲಾಖೆಯ ಯು.ಆರ್. ಡಬ್ಲ್ಯೂ ಪ್ರವೀಣ್ ನಾಯಕ್, ಇತರ ಪಂಚಾಯತ್ ಗಳ ವಿ.ಆರ್.ಡಬ್ಲ್ಯೂ ರವರಾದ ದಿನೇಶ್, ರಂಜಿನಿ, ಕೃಷ್ಣ ಪ್ರಸಾದ್, ಉಮ್ಮರ್, ಪುಷ್ಪಶ್ರೀ, ಕಾವೇರಿ, ಹರ್ಷಿತ್, ಮೀನಾಕ್ಷಿ, ಭವ್ಯ ಷಣ್ಮುಖ, ಶರಣ್ಯ, ಮೇಘ, ಲಿಖಿತ ಮತ್ತು ದಾದಿ ನಯನ ಹಾಜರಿದ್ದರು
ತಜ್ಞ ವೈದ್ಯರು ಸಹಕಾರ ನೀಡಿದರು. ಹಲವಾರು ಜನ ಫಲಾನುಭವಿಗಳು ಇದರ ಪ್ರಯೋಜನ ಪಡೆದು ಕೊಂಡರು.










